ಬೆಂಗಳೂರು: ಕೊರೊನಾ ವೈರಸ್ ಭೀತಿಯ ಬೆನ್ನಲ್ಲೇ ಸೋಂಕು ಕಾಣಿಸಿದ ದೇಶಗಳಿಂದನಗರಕ್ಕೆ ಬರುವವರ ಸಂಖ್ಯೆ ಹೆಚ್ಚಳವಾಗಿರುವುದು ಇನ್ನಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡಿದ್ದ ಈ ಸೋಂಕು 27 ದೇಶಗಳನ್ನು ಈಗಾಗಲೇ ಪ್ರವೇಶಿಸಿದೆ. ಅಧಿಕ ಪ್ರಕರಣಗಳು ವರದಿಯಾಗಿರುವ ಚೀನಾ, ಹಾಂಕಾಂಗ್ ಹಾಗೂ ಸಿಂಗಪುರದಿಂದ ಬರುವ ಪ್ರಯಾಣಿಕರನ್ನು ಪ್ರತಿನಿತ್ಯಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಈವರೆಗೆ 10,184 ಮಂದಿಯನ್ನು ತಪಾಸಣೆ ಮಾಡಲಾಗಿದ್ದು, ಯಾವುದೇ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿಲ್ಲ.
ಆದರೆ, ಆ ರಾಷ್ಟ್ರಗಳಿಂದ ಇಲ್ಲಿಗೆ ಬರುವವರ ಸಂಖ್ಯೆಯಲ್ಲಿ ಮಾತ್ರ ಗಣನೀಯ ಏರಿಕೆಯಾಗಿದೆ.
ಜ.20ರಿಂದ ಜ.31ರವರೆಗೆ ಕೊರೊನಾ ಪ್ರಕರಣ ಅಧಿಕ ವರದಿಯಾದ ದೇಶಗಳಿಂದಪ್ರತಿನಿತ್ಯ ಸರಾಸರಿ 400 ಮಂದಿ ಪ್ರಯಾಣಿಕರು ಬಂದಿದ್ದಾರೆ. ಫೆ.1ರಿಂದ ಪ್ರತಿನಿತ್ಯ ಸರಾಸರಿ 1,400 ಮಂದಿ ಆ ದೇಶಗಳಿಂದಲೇ ಬರುತ್ತಿದ್ದಾರೆ. ಬುಧವಾರ ಚೀನಾದಿಂದ ಯಾವುದೇ ವಿಮಾನ ನಗರ ಪ್ರವೇಶಿಸಿಲ್ಲ.
ಹಾಂಕಾಂಗ್ನಿಂದ 1, ಥಾಯ್ಲೆಂಡ್ನಿಂದ 4 ಹಾಗೂ ಸಿಂಗಪುರದಿಂದ 3 ವಿಮಾನಗಳು ಬಂದಿದ್ದು, ಒಟ್ಟು 888 ಪ್ರಯಾಣಿಕರುಕೆಐಎನಲ್ಲಿ ತಪಾಸಣೆಗೆ ಒಳಪಟ್ಟಿದ್ದಾರೆ.
ಇದುವರೆಗೆ 52 ಮಂದಿಯ ರಕ್ತದ ಮಾದರಿಗಳಲ್ಲಿ ಕೊರೊನಾ ವೈರಸ್ ಪತ್ತೆಯಾಗಿಲ್ಲ.
ಬುಧವಾರ ಮತ್ತೆ ಐವರು ಶಂಕಿತರ ರಕ್ತದ ಮಾದರಿಗಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಇದು ಸೇರಿದಂತೆ ಒಟ್ಟು 74 ಮಂದಿಯ ರಕ್ತದ ಮಾದರಿಗಳ ಕುರಿತ ವರದಿ ಇನ್ನಷ್ಟೇ ಬರಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.