ಬೆಂಗಳೂರು: ಮಾಲೀಕನಿಂದ ಹಣ ದೋಚುವುದಕ್ಕಾಗಿ ನಕಲಿ ಪೊಲೀಸರ ತಂಡ ರಚಿಸಿ, ಮಾಲೀಕನ ಬೈಕ್, ಎಟಿಎಂನಲ್ಲಿದ್ದ ಹಣ ಕಳವು ಮಾಡಿಸಿರುವ ನಾಲ್ಕು ಮಂದಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.
ಬಸವೇಶ್ವರನಗರದ ನಿವಾಸಿ ಶರತ್ ಶೆಟ್ಟಿ (25), ಮೂಡಲಪಾಳ್ಯದ ಪೂರ್ವಿಕ್ ರಾಜ್ (21), ಚೋಳರ ಪಾಳ್ಯದ ಮೋಹನ್ ಕುಮಾರ್ (24), ಜಾಲಹಳ್ಳಿಯಲ್ಲಿ ವಾಸವಿದ್ದ ತಪಸ್ ರಾಯ್ (24) ಬಂಧಿತರು.
‘ಜಾಲಹಳ್ಳಿಯಲ್ಲಿ ವಾಸವಿದ್ದ ಪಶ್ಚಿಮ ಬಂಗಾಳದ ತಪನ್ ಬಿಸ್ವಾಸ್ ವಂಚನೆಗೆ ಒಳಗಾದ ವ್ಯಕ್ತಿ. ಬಂಧಿತ ತಪಸ್ ಇವರ ಬಳಿಯೇ ಕೆಲಸ ಮಾಡಿಕೊಂಡಿದ್ದು, ಈ ಕೃತ್ಯ ಎಸಗಿದ್ದಾನೆ. ಬಂಧಿತರಿಂದ₹41 ಸಾವಿರ ನಗದು, ಒಂದು ಸ್ಕೂಟರ್ ಹಾಗೂ ಎರಡು ಬೈಕ್ ಜಪ್ತಿ ಮಾಡಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿಸಂಜೀವ್ ಪಾಟೀಲ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.