ADVERTISEMENT

ಮಾರಕಾಸ್ತ್ರಗಳಿಂದ ದಾಳಿ: ರೌಡಿಶೀಟರ್ ಹತ್ಯೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 19:45 IST
Last Updated 21 ಏಪ್ರಿಲ್ 2021, 19:45 IST

ಬೆಂಗಳೂರು: ನಗರದಲ್ಲಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ರೌಡಿಶೀಟರ್‌ ಒಬ್ಬನನ್ನು ಹತ್ಯೆ ಮಾಡಿರುವ ಘಟನೆ ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ರವಿವರ್ಮ ಅಲಿಯಾಸ್ ಅಪ್ಪು(30) ಕೊಲೆಯಾದ ರೌಡಿಶೀಟರ್. ಈತವಿವೇಕನಗರ ಠಾಣೆಯ ರೌಡಿಶೀಟರ್.

‘ಪ್ರಕರಣವೊಂದರಲ್ಲಿ ರವಿವರ್ಮ ಜೈಲುವಾಸ ಅನುಭವಿಸಿ, ಇತ್ತೀಚೆಗೆಷ್ಟೇ ಬಿಡುಗಡೆಯಾಗಿದ್ದ. ಮಂಗಳವಾರ ರಾತ್ರಿ ಅಶೋಕನಗರದ ನೀಲಸಂದ್ರದ ಬಳಿಯಿದ್ದ ಸ್ನೇಹಿತರ ಮನೆಗೆ ತೆರಳಿದ್ದ’.

ADVERTISEMENT

‘ಈ ವಿಚಾರ ಮೊದಲೇ ತಿಳಿದಿದ್ದ ದುಷ್ಕರ್ಮಿಗಳು, ಈತ ವಾಪಸ್‌ ಬರುವುದನ್ನೇ ಕಾದು ಹತ್ಯೆ ನಡೆಸಲು ಸಜ್ಜಾಗಿದ್ದರು.ರವಿವರ್ಮ ಬಂದ ಕೂಡಲೇ ದುಷ್ಕರ್ಮಿಗಳ ತಂಡ ಏಕಾಏಕಿ ದಾಳಿ ನಡೆಸಿದೆ. ಹತ್ಯೆ ನಂತರ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಹಳೆಯ ದ್ವೇಷದಿಂದ ಕೊಲೆ ಮಾಡಿರುವ ಶಂಕೆ ಇದೆ. ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.