ADVERTISEMENT

ಸೈಬರ್ ಅಪರಾಧ ಅರಿವು

​ಪ್ರಜಾವಾಣಿ ವಾರ್ತೆ
Published 27 ಜುಲೈ 2019, 20:01 IST
Last Updated 27 ಜುಲೈ 2019, 20:01 IST
ಕಾರ್ಯಗಾರವನ್ನು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದೂರು ಉದ್ಘಾಟಿಸಿದರು
ಕಾರ್ಯಗಾರವನ್ನು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದೂರು ಉದ್ಘಾಟಿಸಿದರು   

ವೈಟ್‌ಫೀಲ್ಡ್‌:‘ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆಉಪಯುಕ್ತ ಮಾಹಿತಿಗಳಿಗಿಂತ ಅನೌಪಚಾರಿಕ ವಿಷಯಗಳೇ ಹೆಚ್ಚಾಗಿ ಹರಿದಾಡುತ್ತಿರುವುದು ವಿಷಾದನೀಯ’ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದೂರು ತಿಳಿಸಿದರು.

ವೈಟ್ ಫೀಲ್ಡ್ ನ ಖಾಸಗಿ ಶಾಲೆಯಲ್ಲಿ ಪ್ರಶಾಂತ್ ಫೌಂಡೇಷನ್ ವತಿಯಿಂದ ಮಹಿಳೆಯರು ಮತ್ತು ಮಕ್ಕಳಿಗಾಗಿ ಆಯೋಜಿಸಿದ್ದ ಸೈಬರ್ ಅಪರಾಧ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ತಂತ್ರಜ್ಞಾನ ಬೆಳೆದಂತೆ ಅಭಿವೃದ್ಧಿಯತ್ತ ಚಿಂತಿಸಬೇಕೆ ವಿನಾ ಅನೌಪಚಾರಿಕ ವಿಚಾರಗಳ ಬಗ್ಗೆ ಗಮನ ಹರಿಸುವುದರಿಂದ ವೈಯಕ್ತಿಕವಾಗಿ ಹಾಗೂ ಸಮಾಜ, ದೇಶಕ್ಕೆ ನಷ್ಟ ಉಂಟಾಗುತ್ತದೆ’ ಎಂದರು.

ADVERTISEMENT

ಕಾರ್ಯಾಗಾರದಲ್ಲಿ ಸೆಂಟ್ ಜೋಸೆಫ್ ಶಾಲೆ. ಪ್ರಗತಿ ಶಾಲೆ. ಸರ್ಕಾರಿ ಪದವಿ ಪೂರ್ವ ಕಾಲೇಜು. ಪ್ರೆಸಿಡೆನ್ಸಿ ಶಾಲೆ. ಎಸ್.ಜಿ.ವಿ ಶಾಲೆ, ವೈಟ್‌ಫೀಲ್ಡ್‌ಗೋಬ್ಲಲ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದರು.

ಈ ಸಂದರ್ಭದಲ್ಲಿಫೌಂಡೇಷನ್‌ ಅಧ್ಯಕ್ಷ ಪ್ರಶಾಂತ್ ರೆಡ್ಡಿ, ರಾಷ್ಟ್ರೀಯ ಮಹಿಳಾ ಆಯೋಗದ ಕೌನ್ಸಿಲರ್ ಅನನ್ಯಸಿಂಗ್ .ಡಾ. ವೀರಸ್ವಾಮಿ ರೆಡ್ಡಿ, ಎನ್.ಜಿ.ಓ. ಪರಿಮಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.