ADVERTISEMENT

ಕನ್ಯಾಕುಮಾರಿಗೆ ಸೈಕಲ್ ಯಾತ್ರೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 22:55 IST
Last Updated 2 ಜನವರಿ 2023, 22:55 IST
ಪ್ರೊ. ಕಿರಣ್‌ ಸೇಥ್ ಅವರ ಬೈಸಿಕಲ್‌ ಯಾತ್ರೆ ಸೋಮವಾರ ಬೆಂಗಳೂರಿನ ವಿಧಾನಸೌಧಕ್ಕೆ ಬಂದು ತಲುಪಿತು.             – ಪ್ರಜಾವಾಣಿ ಚಿತ್ರ
ಪ್ರೊ. ಕಿರಣ್‌ ಸೇಥ್ ಅವರ ಬೈಸಿಕಲ್‌ ಯಾತ್ರೆ ಸೋಮವಾರ ಬೆಂಗಳೂರಿನ ವಿಧಾನಸೌಧಕ್ಕೆ ಬಂದು ತಲುಪಿತು.  – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಭಾರತದ ಪ್ರಾಚೀನ ಸಂಸ್ಕೃತಿ, ಯೋಗ ಮತ್ತು ಭಾರತೀಯ ಸಾಂಪ್ರದಾಯಿಕ ಕಲೆಗಳ ಬಗ್ಗೆ ಅರಿವು ಮೂಡಿಸಲು ಸ್ಪಿಕ್‌ಮೆಕೆಯ ಸ್ಥಾಪಕ, 73 ವರ್ಷದ ಪ್ರೊ. ಕಿರಣ್‌ ಸೇಥ್‌ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬೈಸಿಕಲ್ ಯಾತ್ರೆ ಹಮ್ಮಿಕೊಂಡಿದ್ದಾರೆ.

ಸೋಮವಾರ ಇಲ್ಲಿ ಸುದ್ದಿಗೋಷ್ಠಿ
ಯಲ್ಲಿ ಮಾತನಾಡಿದ ಅವರು, ‘ಭಾರತೀಯ ಶಾಸ್ತ್ರೀಯ ಸಂಗೀತ, ನೃತ್ಯ, ಜಾನಪದ ಸಂಗೀತ ಮತ್ತು ನೃತ್ಯ, ಧ್ಯಾನ, ಯೋಗ, ಚಲನಚಿತ್ರಗಳ ಪ್ರದರ್ಶನ ಜೊತೆಗೆ ಭಾರತೀಯ ಪರಂಪರೆಯ ಬಗ್ಗೆ ವಿದ್ಯಾರ್ಥಿಗಳಲ್ಲಿರುವ
ಆಸಕ್ತಿಯನ್ನು ಉತ್ತೇಜಿಸಲು ಸ್ಪಿಕ್‌ಮೆಕೆ ಸಂಸ್ಥೆಯಿಂದ ಶಾಲಾ–ಕಾಲೇಜುಗಳಲ್ಲಿ ಕರಕುಶಲ ಶಿಬಿರಗಳನ್ನು
ಆಯೋಜಿಸಲಾಗುತ್ತದೆ’ ಎಂದರು.

ಕಿರಣ್‌ ಸೇಥ್‌ ಅವರು 2022ರ ಆಗಸ್ಟ್‌ 15ರಿಂದ ಕಾಶ್ಮೀರದ ಶ್ರೀನಗರದಿಂದ ಬೈಸಿಕಲ್ ಯಾತ್ರೆ
ಪ್ರಾರಂಭಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.