ADVERTISEMENT

ದಾಬಸ್ ಪೇಟೆ: ಗರಿಗೆದರಿದ ಕೃಷಿ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 6 ಮೇ 2020, 20:28 IST
Last Updated 6 ಮೇ 2020, 20:28 IST
ಉಳುಮೆಯಲ್ಲಿ ತೊಡಗಿರುವುದು
ಉಳುಮೆಯಲ್ಲಿ ತೊಡಗಿರುವುದು   

ದಾಬಸ್ ಪೇಟೆ: ಸೋಂಪುರ ಹೋಬಳಿಯುದ್ದಕ್ಕೂ ನಾಲ್ಕೈದು ದಿನಗಳಿಂದ ಪೂರ್ವ ಮುಂಗಾರು ಹದವಾಗಿ ಬೀಳುತ್ತಿದ್ದು ರೈತರು ಹೊಲಗಳ ಉಳುಮೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಗ್ರಾಮೀಣ ಭಾಗದಲ್ಲಿ ಭರಣಿ ಮಳೆ ಬಿದ್ದರೆ ಧರಣಿ ತುಂಬಾ ಬೆಳೆ ಅನ್ನುವ ಮಾತಿದೆ. ಅದರಂತೆ ಭರಣಿ ಮಳೆ ಹೋಬಳಿಯಾದ್ಯಂತ ಬೀಳುತ್ತಿದ್ದು, ಈ ವರ್ಷ ಉತ್ತಮ ಬೆಳೆ ಆಗುತ್ತದೆ ಎನ್ನುವ ಆಶಯದಲ್ಲಿ ರೈತರ ಮೊಗದಲ್ಲಿ ಹರುಷ ಮೂಡಿಸಿದೆ.

ತೊಗರಿ, ಅವರೆ, ಅಲಸಂದೆ, ಮುಸುಕಿನ ಜೋಳ, ಕಡಲೆ ಕಾಯಿ ಇತ್ಯಾದಿ ಬೆಳೆಗಳನ್ನು ಪೂರ್ವ ಮುಂಗಾರಿನಲ್ಲಿ ಬಿತ್ತನೆ ಮಾಡಿದರೆ ಉತ್ತಮ ಫಸಲು ಸಿಗುತ್ತದೆನ್ನುವುದು ರೈತರ ನಿರೀಕ್ಷೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.