ADVERTISEMENT

ದಯಾನಂದ​ ಅಮಾನತು ಆದೇಶ ರದ್ದತಿಗೆ ಒತ್ತಾಯ: ಹೆಡ್ ಕಾನ್‌ಸ್ಟೆಬಲ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 15:55 IST
Last Updated 6 ಜೂನ್ 2025, 15:55 IST
ರಾಜಭವನ ಮುಂದೆ ಹೆಡ್​ ಕಾನ್‌ಸ್ಟೆಬಲ್ ನರಸಿಂಹರಾಜ್ ಪ್ರತಿಭಟನೆ
ರಾಜಭವನ ಮುಂದೆ ಹೆಡ್​ ಕಾನ್‌ಸ್ಟೆಬಲ್ ನರಸಿಂಹರಾಜ್ ಪ್ರತಿಭಟನೆ   

ಬೆಂಗಳೂರು: ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರ ಅಮಾನತು ಆದೇಶ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ರಾಜಭವನ ಮುಂದೆ ಹೆಡ್​ ಕಾನ್‌ಸ್ಟೆಬಲ್ ಏಕಾಂಗಿ ಪ್ರತಿಭಟನೆ ನಡೆಸಿದರು

ತೋಳಿಗೆ ಕಪ್ಪುಪಟ್ಟಿ ಧರಿಸಿ ಅಂಬೇಡ್ಕರ್ ಭಾವಚಿತ್ರ ಇಟ್ಟುಕೊಂಡು ರಾಜಭವನ ಮುಂದೆ ಪ್ರತಿಭಟನೆ ನಡೆಸಿದ ಹೆಡ್‌ಕಾನ್‌ಸ್ಟೆಬಲ್ ನರಸಿಂಹರಾಜ್, ಅಮಾನತು ಆದೇಶ ಕೂಡಲೇ ಹಿಂಪಡೆಯಬೇಕು ಹಾಗೂ ಪೊಲೀಸರಿಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

‘ಪೊಲೀಸರು ಒಂದು ರೀತಿ ಬ್ರೋಕರ್​ಗಳಾಗಿದ್ದಾರೆ. ರಾಜಕಾರಣಿಗಳ ಮಾತು ಕೇಳಬೇಕು. ದಯಾನಂದ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರನ್ನು ಅಮಾನತು ಮಾಡಿದ್ದು ಸರಿಯಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ADVERTISEMENT

ಈ ವೇಳೆ ವಿಧಾನಸೌಧ ಠಾಣೆ ಪೊಲೀಸರು, ನರಸಿಂಹರಾಜ್ ಅವರನ್ನು ವಶಕ್ಕೆ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.