ADVERTISEMENT

ರೋಟರಿಯಿಂದ ಶಾಲಾ ಸಮವಸ್ತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2023, 16:22 IST
Last Updated 1 ಅಕ್ಟೋಬರ್ 2023, 16:22 IST
ರೋಟರಿ ವತಿಯಿಂದ ಉತ್ತಮ ಶಿಕ್ಷಕರಿಗೆ ರಾಷ್ಟ್ರ ನಿರ್ಮಾಣ ಪ್ರಶಸ್ತಿ ಪ್ರದಾನ ಮಾಡಲಾಯಿತು. 
ರೋಟರಿ ವತಿಯಿಂದ ಉತ್ತಮ ಶಿಕ್ಷಕರಿಗೆ ರಾಷ್ಟ್ರ ನಿರ್ಮಾಣ ಪ್ರಶಸ್ತಿ ಪ್ರದಾನ ಮಾಡಲಾಯಿತು.    

ಕೆಂಗೇರಿ: ತಾವರೆಕೆರೆ ರೋಟರಿ ಪ್ರೈಮ್ ವತಿಯಿಂದ ನೂರಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು.

ತಾವರೆಕೆರೆ ಹೋಬಳಿಯ ಪೆದ್ದನ ಪಾಳ್ಯ ಶಾಲಾ ಆವರಣದಲ್ಲಿ ರಾಷ್ಟ್ರ ನಿರ್ಮಾಣ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಅಂಗವಿಕಲರಿಗೆ ಸವಲತ್ತು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಮೂಹ ಸಂಪನ್ಮೂಲ ಶಿಕ್ಷಕ ಚಿಕ್ಕವೀರಯ್ಯ ಸಹಿತ ಮೂವರಿಗೆ ರಾಷ್ಟ್ರ ನಿರ್ಮಾಣ ಪ್ರಶಸ್ತಿ ಸ್ವೀಕರಿಸಿದರು. ಶ್ರವಣದೋಷ ಉಳ್ಳವರಿಗೆ ಶ್ರವಣ ಯಂತ್ರ ವಿತರಿಸಲಾಯಿತು.

ADVERTISEMENT

ಚೋಳನಾಯಕನಹಳ್ಳಿ ಪಂಚಾಯಿತಿ ಅಧ್ಯಕ್ಷ ಆನಂದಸ್ವಾಮಿ, ರೋಟರಿ ಅಧ್ಯಕ್ಷ ಗಂಗ ನರಸಯ್ಯ, ಪದಾಧಿಕಾರಿಗಳಾದ ಸ್ವಾಮಿ, ಕಾಂತರಾಜು, ಬೆಂಗಳೂರಯ್ಯ, ಶ್ರೀನಿವಾಸಯ್ಯ, ನವೀನ್, ಹರೀಶ್, ಬ್ರೆಡ್ ಮಂಜುನಾಥ್, ಆನಂದ್, ಉದಯ್ ಗೌಡ, ಚನ್ನೇಗೌಡ, ಆರ್ ಮಂಜುನಾಥ್, ಜಯರಾಮ್, ಶ್ರೀನಿವಾಸ್, ಪುಟ್ಟ ಲಕ್ಷ್ಮಮ್ಮ, ಗಂಗಮ್ಮ, ಶಿಕ್ಷಕರಾದ ಪುಟ್ಟರಾಜು, ರಮೇಶ್, ಮಂಜುನಾಥ್, ಮಹದೇವಮ್ಮ, ವಿಜಯಲಕ್ಷ್ಮಿ ಪಾಟೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.