ADVERTISEMENT

ಬೆಂಗಳೂರು: ಪತ್ನಿ, ಮಗಳ ಮೇಲೆ ಕಾದ ಎಣ್ಣೆ ಸುರಿದಿದ್ದ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2022, 16:51 IST
Last Updated 3 ಫೆಬ್ರುವರಿ 2022, 16:51 IST
   

ಬೆಂಗಳೂರು: ಪತ್ನಿ ಹಾಗೂ ಮಗಳ ಮೇಲೆ ಕಾದ ಎಣ್ಣೆ ಸುರಿದಿದ್ದ ಆರೋಪಿ ಥಾಮಸ್ ಎಂಬಾತನನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.

‘ಎಲ್‌.ಆರ್‌. ನಗರದ ನಿವಾಸಿ ಥಾಮಸ್, ಜ. 30ರಂದು ಕೃತ್ಯ ಎಸಗಿ ಪರಾರಿಯಾಗಿದ್ದ. ಘಟನೆಯಲ್ಲಿ ಗಾಯಗೊಂಡಿದ್ದ ಆತನ ಪತ್ನಿ ಅಂಥೋಣಿಯಮ್ಮ ಹಾಗೂ ಮಗಳು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

’ಮದ್ಯವ್ಯಸನಿ ಆಗಿದ್ದ ಥಾಮಸ್, ನಿತ್ಯವೂ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಪತ್ನಿಯ ಶೀಲ ಶಂಕಿಸಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಹಲ್ಲೆಯನ್ನೂ ಮಾಡುತ್ತಿದ್ದ.’

ADVERTISEMENT

‘ಜ. 30ರಂದು ಮಧ್ಯಾಹ್ನ ಪತ್ನಿ ಅಂಥೋಣಿಯಮ್ಮ ಮೇಲೆ ಹಲ್ಲೆ ಮಾಡಿದ್ದ ಆರೋಪಿ, ಅವರ ಮೈ ಮೇಲೆ ಕಾದ ಎಣ್ಣೆ ಸುರಿದಿದ್ದ. ಬಿಡಿಸಲು ಬಂದ 13 ವರ್ಷದ ಮಗಳ ಮೇಲೂ ಎಣ್ಣೆ ಎರಚಿದ್ದ. ಅಂಥೋನಿಯಮ್ಮ ಅವರ ಮುಖ, ಎದೆ ಹಾಗೂ ಕೈ-ಕಾಲುಗಳಿಗೆ ಸುಟ್ಟ ಗಾಯವಾಗಿದೆ. ಮಗಳ ಮುಖ ಹಾಗೂ ಕೈ–ಕಾಲಿಗೂ ಗಾಯವಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.