ADVERTISEMENT

ಬೆಂಗಳೂರು: 29 ಕೆ.ಜಿ ತೂಕದ ದಂತಗಳು ಜಪ್ತಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 21:35 IST
Last Updated 19 ಮಾರ್ಚ್ 2022, 21:35 IST

ಬೆಂಗಳೂರು: ಆನೆ ದಂತಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಹಾಸನ ತಾಲ್ಲೂಕಿನ ವೀರಾಪುರದ ಚಂದ್ರೇಗೌಡ (46), ಹಾವೇರಿಯ ಶಿಗ್ಗಾವಿ ತಾಲ್ಲೂಕಿನ ಹುಲಗೂರಿನ ಸೋಮಲಿಂಗಪ್ಪ ಕೊಡದ್ (41) ಹಾಗೂ ಪ್ರವೀಣ್ ಗುಳೇದ್ (24) ಬಂಧಿತರು. ಅವರಿಂದ 29 ಕೆ.ಜಿ ತೂಕದ ಎರಡು ದಂತಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಟಾಟಾ ಇಂಡಿಕಾ ಕಾರಿನಲ್ಲಿ ದಂತ ಇಟ್ಟುಕೊಂಡಿದ್ದ ಆರೋಪಿಗಳು, ಬನಶಂಕರಿ ಮೂರನೇ ಹಂತದಲ್ಲಿ ಸಂಚರಿಸುತ್ತಿದ್ದರು. ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದೂ ತಿಳಿಸಿದರು.

ADVERTISEMENT

‘ವ್ಯಕ್ತಿಯೊಬ್ಬರಿಂದ ತಂದಿದ್ದ ದಂತಗಳನ್ನು ಆರೋಪಿಗಳು ನಗರದ ನಿವಾಸಿಯೊಬ್ಬರಿಗೆ ನೀಡಲು ಹೊರಟಿದ್ದರು. ನಿವಾಸಿ ಯಾರು ಎಂಬುದು ಗೊತ್ತಾಗಿಲ್ಲ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.