ADVERTISEMENT

ಅದೃಷ್ಟದ ಕಲ್ಲೆಂದು ಮಾರಾಟ ಯತ್ನ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 3:57 IST
Last Updated 27 ಆಗಸ್ಟ್ 2020, 3:57 IST
ಕಲ್ಲು
ಕಲ್ಲು   

ಬೆಂಗಳೂರು: ಅದೃಷ್ಟದ ಕಲ್ಲು ಎಂದು ಜನರನ್ನು ನಂಬಿಸಿ ಮಾರಲು ಮುಂದಾಗಿದ್ದ ಮೂವರು ಆರೋಪಿಗಳನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಶ್ರೀನಿವಾಸ್, ತಿರುಪತಪ್ಪ ಹಾಗೂ ಹರೀಶ್ ಬಂಧಿತರು. ವೃತ್ತಿಯಲ್ಲಿ ಆಟೊ ಚಾಲಕರಾಗಿರುವ ಇವರಿಗೆ ಲಾಕ್‍ಡೌನ್‍ನಿಂದ ಸಂಪಾದನೆ ಕಡಿಮೆಯಾಗಿತ್ತು.

ಈ ವೇಳೆ ಆರ್.ಟಿ.ನಗರದ ಮನ್ಸೂರ್ ಎಂಬಾತನ ಪರಿಚಯವಾಗಿ, ಈ ಕೆಲಸಕ್ಕೆ ಇಳಿದಿದ್ದರು. ಎಲ್ಲಿಂದಲೋ ತಂದಿದ್ದ ಹಸಿರು ಬಣ್ಣದ ಒಂದು ಕೆ.ಜಿ.ಕಲ್ಲನ್ನು ₹1 ಕೋಟಿಗೆ ಮಾರಿದರೆ, ಪಾಲು ನೀಡುವುದಾಗಿ ಆತ ಆಮಿಷವೊಡ್ಡಿದ್ದ ಎಂದು ತಿಳಿದು ಬಂದಿದೆ.

ADVERTISEMENT

ಆರೋಪಿಗಳ ಪೈಕಿ ಹರೀಶ್ ಎಂಬಾತನಿಗೆ ಕೊರೊನಾ ಸೋಂಕು ಇರುವುದರಿಂದ ಕೋವಿಡ್ ಕೇಂದ್ರಕ್ಕೆ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಮನ್ಸೂರ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.