ADVERTISEMENT

ರಾಗಿ ಖರೀದಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ

ರೈತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 23:21 IST
Last Updated 9 ಮಾರ್ಚ್ 2020, 23:21 IST
ನಾಗದೇವನಹಳ್ಳಿಯಲ್ಲಿ ಹೊರವರ್ತುಲ ರಸ್ತೆಗೆ ಅಡ್ಡಲಾಗಿ ರಾಗಿ ತುಂಬಿದ್ದ ಲಾರಿ, ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿ ಪ್ರತಿಭಟಿಸಿದ ರೈತರು 
ನಾಗದೇವನಹಳ್ಳಿಯಲ್ಲಿ ಹೊರವರ್ತುಲ ರಸ್ತೆಗೆ ಅಡ್ಡಲಾಗಿ ರಾಗಿ ತುಂಬಿದ್ದ ಲಾರಿ, ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿ ಪ್ರತಿಭಟಿಸಿದ ರೈತರು    

ರಾಜರಾಜೇಶ್ವರಿನಗರ: ರಾಗಿ ಖರೀದಿಗಾಗಿಉಗ್ರಾಣಕ್ಕೆ ಕರೆಯಿಸಿ ದಿನವಿಡೀ ಕಾಯುವಂತೆ ಮಾಡಿಯೂ ರಾಗಿ ಖರೀದಿಸದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.

ನಾಗದೇವನಹಳ್ಳಿಯ ರಾಗಿ ಖರೀದಿ ಕೇಂದ್ರದ ಸಮೀಪದ ಹೊರವರ್ತುಲ ರಸ್ತೆಗೆ ಅಡ್ಡಲಾಗಿ ರಾಗಿ ತುಂಬಿಕೊಂಡು ತರಲಾಗಿದ್ದ ಲಾರಿ, ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.

‘ಭಾನುವಾರ ರಾತ್ರಿ 8ಕ್ಕೆ ಬಂದು, ಸೋಮವಾರ ಸಂಜೆ 5ಗಂಟೆಯಾದರೂ ರಾಗಿ ಖರೀದಿಸಲಿಲ್ಲ. ಆಳುಗಳಿಲ್ಲವೆಂದು ಸಬೂಬು ಹೇಳಿದರು’ ಎಂದುರೈತರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.