ಬೆಂಗಳೂರು: ಕೋವಿಡ್-19ರ ಪರಿಣಾಮ ಆರ್ಥಿಕ ಸಂಷ್ಟಕ್ಕೆ ಸಿಲುಕಿರುವ ವಕೀಲರಿಗೆ ಧನ ಸಹಾಯ ಮಾಡಲು ಬೆಂಗಳೂರು ವಕೀಲರ ಗುಂಪು (ಆರ್ಸಿಬಿ ತಂಡ) ಮುಂದಾಗಿದೆ.
'ಸ್ವಯಂಪ್ರೇರಣೆಯಿಂದ ಸ್ನೇಹಿತರು ಮತ್ತು ದಾನಿಗಳಿಂದ ಹಣ ಸಂಗ್ರಹಿಸಲಾಗಿದೆ. ಅಗತ್ಯವಿರುವ ವಕೀಲರಿಂದ ಅರ್ಜಿ ಆಹ್ವಾನಿಸಿ ಈ ನೆರವು ನೀಡಲಾಗುವುದು. ಅರ್ಹರಿಗೆ ತಲಾ ₹ 3 ಸಾವಿರ ನೀಡಲು ನಿರ್ಧರಿಸಲಾಗಿದೆ. ಹೆಚ್ಚಿನ ಮಾಹಿತಿಗೆ 95385-76600 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು' ಎಂದು ತಂಡದ ಮುಖ್ಯಸ್ಥರೂ ಆದ ವಕೀಲ ಜೆ.ಎಸ್ ರವಿಗೌಡ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.