ADVERTISEMENT

ಪುಟ್ಟೇನಹಳ್ಳಿ ಕೆರೆಯಲ್ಲಿ ಮೀನು ಕಳವು

ಪಕ್ಷಿ ಸಂರಕ್ಷಣೆಗೆ ಮೀಸಲಾಗಿರುವ ಜಲಮೂಲದಲ್ಲಿ ರಾತ್ರಿವೇಳೆ ಬಲೆ; ಅರಣ್ಯ ಇಲಾಖೆ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 19:22 IST
Last Updated 5 ಡಿಸೆಂಬರ್ 2022, 19:22 IST
ಪುಟ್ಟೇನಹಳ್ಳಿ ಕೆರೆಯಲ್ಲಿ ರಾತ್ರಿವೇಳೆ ಮೀನು ಹಿಡಿಯುತ್ತಿರುವುದು
ಪುಟ್ಟೇನಹಳ್ಳಿ ಕೆರೆಯಲ್ಲಿ ರಾತ್ರಿವೇಳೆ ಮೀನು ಹಿಡಿಯುತ್ತಿರುವುದು   

ಬೆಂಗಳೂರು: ನಗರದ ಕೆರೆಗಳಲ್ಲಿ ಕಲ್ಮಶದಿಂದಮೀನುಗಳುಸಾಯುತ್ತಿರುವುದುಸಾಮಾನ್ಯವಾಗುತ್ತಿರುವಸಂದರ್ಭದಲ್ಲಿ,ಪಕ್ಷಿಗಳಿಗಾಗಿಯೇಮೀಸಲಾಗಿರುವ ಮೀನುಗಳನ್ನು ಕಳವು ಮಾಡಲಾಗುತ್ತಿದೆ.

ಯಲಹಂಕದಲ್ಲಿರುವಪುಟ್ಟೇನಹಳ್ಳಿಕೆರೆಯಲ್ಲಿ ರಾತ್ರೋರಾತ್ರಿ ಮೀನುಗಳನ್ನು ಕಳವು ಮಾಡುವುದನ್ನು ಸ್ಥಳೀಯರು ಸಾಕ್ಷಿ ಸಮೇತ ಹಿಡಿದಿದ್ದಾರೆ. ಆದರೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಕೆರೆಯ ಉಸ್ತುವಾರಿ ಹೊಂದಿರುವ ಅರಣ್ಯ ಇಲಾಖೆ ವಿಫಲವಾಗಿದೆ.

ಪುಟ್ಟೇನಹಳ್ಳಿಕೆರೆ 37 ಎಕರೆ 14 ಗುಂಟೆವಿಸ್ತೀರ್ಣದಲ್ಲಿದ್ದು, ಪ್ರಮುಖವಾದ ಡಾರ್ಟರ್‌, ಪೈಂಟೆಡ್‌ ಸ್ಟಾರ್ಕ್ಸ್‌, ಬ್ಲಾಕ್‌ ಕ್ರೌನ್ಡ್‌ ನೈಟ್‌ ಹೆರಾನ್ಸ್‌ಸೇರಿದಂತೆ127 ಜಾತಿಯಪಕ್ಷಿಗಳಿವೆ. ಹಿಮಾಲಯ ಹಾಗೂಸೈಬಿರಿಯಾದಿಂದಪಕ್ಷಿಗಳು ವಲಸೆ ಬರುತ್ತವೆ. ಅಲ್ಲದೆ, ಇಲ್ಲಿ ಹಲವು ವಿಶಿಷ್ಟ ಜಾತಿ ಗಿಡ–ಮರಗಳಿವೆ.ಹೀಗಾಗಿ2015ರಲ್ಲೇಪುಟ್ಟೇನಹಳ್ಳಿಕೆರೆಯನ್ನು ‘ಪಕ್ಷಿ ಸಂರಕ್ಷಣೆಗೆ ಮೀಸಲು’ ಎಂದುಸರ್ಕಾರಆದೇಶಿಸಿದೆ. ಅರಣ್ಯ ಇಲಾಖೆ ಇದರ ಮೇಲ್ವಿಚಾರಣೆ ಹೊಂದಿದೆ.

ADVERTISEMENT

‘ಕೆಲವು ತಿಂಗಳಿಂದ ಹಕ್ಕಿಗಳ ವಾಸ ಹಾಗೂ ಆಗಮನ ಕೆರೆಯಲ್ಲಿಕಡಿಮೆಯಾಗುತ್ತಿತ್ತು. ಇದರ ಬಗ್ಗೆ ನಾವೆಲ್ಲ ಸಾಕಷ್ಟುಆತಂಕಗೊಂಡಿದ್ದೆವು.ಕಲ್ಮಶಹೆಚ್ಚಾಯಿತೇಎಂಬ ಬಗ್ಗೆ ಯೋಚಿಸುತ್ತಿದ್ದೆವು. ಆದರೆ ಕಾರಣ ಬೇರೆಯೇ ಆಗಿತ್ತು.ಪಕ್ಷಿಗಳಿಗಾಗಿಯೇಮೀಸಲಾಗಿರುವ ಮೀನುಗಳನ್ನು ಇಲ್ಲಿ ರಾತ್ರಿಹಿಡಿಯಲಾಗುತ್ತಿದೆ. ರಾತ್ರಿ 11ರ ನಂತರ ಬಲೆ ಹಾಕಿ, 3 ಗಂಟೆಯ ವೇಳೆಗೆ ಕೊಂಡೊಯ್ಯಲಾಗುತ್ತಿತ್ತು. ನಾವೆಲ್ಲ ಸ್ಥಳೀಯರು ಸೇರಿಕೊಂಡು ಇದನ್ನುವಿಡಿಯೊ,ಫೋಟೊಗಳಸಾಕ್ಷಿ ಸಹಿತ ವಾಹನವನ್ನು ಹಿಡಿದೆವು’ ಎಂದು ಸ್ಥಳೀಯಪಕ್ಷಿಪ್ರೇಮಿರಮೇಶ್‌ ಹೇಳಿದರು.

‘ಪಕ್ಷಿ ಸಂರಕ್ಷಿತ ಮೀಸಲು ಕೆರೆಯಲ್ಲಿ ಮೀನುಗಳನ್ನು ಹಿಡಿಯುವಂತಿಲ್ಲ. ಬದಲಿಗೆ ಪಕ್ಷಿಗಳಿಗೆ ಅಗತ್ಯವಾದ ಮೀನುಗಳನ್ನು ಸಾಕಬೇಕು. ಆದರೆ, ಇದರ ಬಗ್ಗೆ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲರ್ಕ್ಷ್ಯ ವಹಿಸಿದೆ. ಜೊತೆಗೆಮೀನುಗಳ್ಳರಿಗೆಬೆನ್ನೆಲುಬಾಗಿ ನಿಂತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಬೆಂಬಲ ಇಲ್ಲದೆ ಈ ರೀತಿ ಕಳವು ಸಾಧ್ಯವಿಲ್ಲ’ ಎಂದು ಸ್ಥಳೀಯರು ದೂರಿದರು.

‘ಅರಣ್ಯ ಅಧಿಕಾರಿಗಳಿಗೇ ಹಣ ನೀಡಿ ಅನುಮತಿ ಪಡೆದಿದ್ದೇವೆ. ನೀವು ಯಾರು ಕೇಳುವುದಕ್ಕೆ ಎಂದು ಮೀನು ಹಿಡಿಯುವವರು ಅಬ್ಬರಿಸುತ್ತಾರೆ’ ಎಂದು ಸ್ಥಳೀಯರು ಆರೋಪಿಸಿದರು.

ಎಚ್ಚರಿಕೆ ಕ್ರಮ: ‘ಮೂರ್ನಾಲ್ಕು ದಿನದಿಂದ ಸ್ಥಳೀಯರು ಮೀನು ಹಿಡಿಯುತ್ತಿರುವ ಬಗ್ಗೆ ನಮಗೆ ಹೇಳಿದರು. ಆ ರೀತಿ ಇದ್ದರೆ ಕ್ರಮ ಕೈಗೊಳ್ಳಲಾಗುತ್ತದೆ. ರಾತ್ರಿಯೆಲ್ಲ ತಪಾಸಣೆ ಮಾಡಲು ಸಿಬ್ಬಂದಿಗೆ ಸೂಚಿಸಲಾಗಿದೆ’ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತ ಪಾಟೀಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.