ADVERTISEMENT

ಎಸ್‌ಇಐಎಎ ಉನ್ನತ ಮಟ್ಟದ ಸಮಿತಿ ಅಧ್ಯಕ್ಷರ ಜತೆ ಖಂಡ್ರೆ ಸಭೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 14:27 IST
Last Updated 12 ಮಾರ್ಚ್ 2024, 14:27 IST
ಈಶ್ವರ ಬಿ. ಖಂಡ್ರೆ
ಈಶ್ವರ ಬಿ. ಖಂಡ್ರೆ   

ಬೆಂಗಳೂರು: ಪರಿಸರ ಸಂರಕ್ಷಣೆ ಮತ್ತು ಕೈಗಾರಿಕಾ ಅಭಿವೃದ್ಧಿ ಕುರಿತು ಪರಿಶೀಲನೆಗಾಗಿ ಅರಣ್ಯ ಇಲಾಖೆಯು ರಚಿಸಿರುವ ರಾಜ್ಯ ಮಟ್ಟದ ಪರಿಸರ ಪರಿಣಾಮ ಪರಾಮರ್ಶನ ಪ್ರಾಧಿಕಾರ (ಎಸ್‌ಇಐಎಎ) ಮತ್ತು ರಾಜ್ಯ ಮಟ್ಟದ ತಜ್ಞರ ನಿಷ್ಕರ್ಶಾ ಸಮಿತಿ (ಎಸ್‌ಇಎಸಿ) ಅಧ್ಯಕ್ಷರ ಜತೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಮಂಗಳವಾರ ಸಭೆ ನಡೆಸಿದರು.

ಎಸ್‌ಇಐಎಎ ಅಧ್ಯಕ್ಷ ಬಿ. ಗುರುಪ್ರಸಾದ್ ಮತ್ತು ಎಸ್‌ಇಎಸಿ ಅಧ್ಯಕ್ಷ ಎನ್‌. ಮಹೇಶ್‌ ಸಭೆಯಲ್ಲಿದ್ದರು. ಇಬ್ಬರ ಜತೆಗೂ ಚರ್ಚಿಸಿದ ಸಚಿವರು, ಜೀವನ ಮತ್ತು ಜೀವನೋಪಾಯಕ್ಕೆ ತೊಂದರೆ ಆಗಬಾರದು. ಪರಿಸರಕ್ಕೂ ಹಾನಿಯಾಗದಂತೆ ಸಮಿತಿಗಳು ಎಚ್ಚರ ವಹಿಸಬೇಕು ಎಂದು ಸೂಚಿಸಿದರು.

ಕೈಗಾರಿಕೆಗಳಿಂದ ಪರಿಸರಕ್ಕೆ ಹಾನಿಯಾಗುವುದನ್ನು ತಡೆಯಬೇಕು. ಆದರೆ, ನವೋದ್ಯಮಿಗಳು, ಉದ್ದಿಮೆದಾರರು ಮತ್ತು ಸಾರ್ವಜನಿಕರ ಶೋಷಣೆಗೆ ಅವಕಾಶವಿಲ್ಲದಂತೆ ಸಮಿತಿಗಳು ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.