ADVERTISEMENT

ಅಂಗವಿಕಲರಿಗಾಗಿ ಉದ್ಯೋಗ ಸೃಷ್ಟಿ: ಸಿದ್ದರಾಮ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 5:29 IST
Last Updated 6 ಡಿಸೆಂಬರ್ 2021, 5:29 IST
ಕಾಲಿನ ನೆರವಿನಿಂದ ಬರೆಯುವ ಅಂಗವಿಕಲ ವಿದ್ಯಾರ್ಥಿ ರಾಯಚೂರಿನ ಅನಿಲ್ ಕುಮಾರ್ ಹಾಗೂ ಅವರ ತಾಯಿಯನ್ನು ಸಿದ್ದರಾಮ ಅವರು ಗೌರವಿಸಿದರು. ಕವಿತಾ ಪಾಂಚಾಳ ಇದ್ದಾರೆ
ಕಾಲಿನ ನೆರವಿನಿಂದ ಬರೆಯುವ ಅಂಗವಿಕಲ ವಿದ್ಯಾರ್ಥಿ ರಾಯಚೂರಿನ ಅನಿಲ್ ಕುಮಾರ್ ಹಾಗೂ ಅವರ ತಾಯಿಯನ್ನು ಸಿದ್ದರಾಮ ಅವರು ಗೌರವಿಸಿದರು. ಕವಿತಾ ಪಾಂಚಾಳ ಇದ್ದಾರೆ   

ಕೆ.ಆರ್.ಪುರ: ‘ಅಂಗವಿಕಲರು ಸ್ವತಂತ್ರ ಬದುಕು ಕಟ್ಟಿಕೊಳ್ಳುವಂತಾಗಬೇಕು. ಇದಕ್ಕಾಗಿ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಉದ್ಯೋಗ ಸೃಷ್ಟಿಸಲು ಕ್ರಮಕೈಗೊಳ್ಳಲಾಗುತ್ತದೆ’ ಎಂದು ಅಂಗವಿಕಲ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಉಪನಿರ್ದೇಶಕ ಸಿದ್ದರಾಮ ತಿಳಿಸಿದರು.

ಡಿಸೆಬಿಲಿಟೀಸ್‌ ರಿಹ್ಯಾಬಿಲಿಟೇಷನ್‌ ಟ್ರಸ್ಟ್‌, ಕೌಶಲಾಭಿವೃದ್ಧಿ ಕೇಂದ್ರ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಸಹಯೋಗದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ‘ರಾಷ್ಟ್ರಮಟ್ಟದ ಕಲಾ ಪ್ರತಿಭೋತ್ಸವ–2021’ ಉದ್ಘಾಟಿಸಿ ಅವರು ಮಾತನಾಡಿದರು.

‘ಅಂಗವಿಕಲರ ಕುರಿತ ದೃಷ್ಟಿಕೋನ ಬದಲಾಗಬೇಕು. ಅವರಲ್ಲಿ ಆತ್ಮಸ್ಥೈರ್ಯ ಮೂಡಿಸಬೇಕು. ಅವರಲ್ಲಿರುವ ವಿಶೇಷ ಕಲೆಯನ್ನು ಗುರುತಿಸಿ ಪೋಷಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ’ ಎಂದರು.

ADVERTISEMENT

ಡಿಸೆಬಿಲಿಟೀಸ್‌ ರಿಹ್ಯಾಬಿಲಿಟೇಷನ್‌ ಟ್ರಸ್ಟ್‌ ಉಪಾಧ್ಯಕ್ಷೆ ಕವಿತಾ ಪಾಂಚಾಳ, ‘ಅಂಗವಿಕಲರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವಂತಾಗಬೇಕು. ಕಲಾ ಪ್ರತಿಭೋತ್ಸವ ಇದಕ್ಕೆ ನೆರವಾಗಲಿದೆ’ ಎಂದು ಹೇಳಿದರು.

ಬಿಜೆಪಿಯ ಬೆಂಗಳೂರು ನಗರ ಘಟಕದ ಉಪಾಧ್ಯಕ್ಷ ಎಸ್.ಕೃಷ್ಣಪ್ಪ, ಎಸ್.ಪಿ.ನಾಗರಾಜ್, ಪತ್ರಕರ್ತ ಗಂಡಸಿ ಸದಾನಂದಸ್ವಾಮಿ, ಮುಖಂಡರಾದ ಎಸ್.ಸೇವಕ ವೆಂಕಟರಮಣಪ್ಪ, ಗ್ರಾ.ಪಂ.ಮಾಜಿ ಸದಸ್ಯ ಅಮ್ಜದ್ ಬೇಗ್, ಕಲಾವಿದ ಕಾಂತರಾಜ್, ಕೆ.ವಿ.ಸತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.