ADVERTISEMENT

ಮೇ 1ಕ್ಕೆ ಹವ್ಯಕ ವಿಶೇಷ ಪ್ರಶಸ್ತಿಗಳ ಪ್ರದಾನ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2022, 17:07 IST
Last Updated 27 ಏಪ್ರಿಲ್ 2022, 17:07 IST
ತ್ರಿಯಂಬಕ ಗಣೇಶ ಹೆಗಡೆ
ತ್ರಿಯಂಬಕ ಗಣೇಶ ಹೆಗಡೆ   

ಬೆಂಗಳೂರು: ಅಖಿಲ ಹವ್ಯಕ ಮಹಾಸಭೆಯುಹವ್ಯಕ ಸಂಸ್ಥಾಪನೋತ್ಸವ ಹಾಗೂ ವಿವಿಧ ಸಾಧಕರಿಗೆ‘ಹವ್ಯಕ ವಿಶೇಷ ಪ್ರಶಸ್ತಿ’ಗಳ ಪ್ರದಾನ ಕಾರ್ಯಕ್ರಮವನ್ನು ಮೇ 1ರಂದು ಸಂಜೆ 4 ಗಂಟೆಗೆ ಮಲ್ಲೇಶ್ವರದ ಹವ್ಯಕ ಭವನದಲ್ಲಿ ಹಮ್ಮಿಕೊಂಡಿದೆ.

ಅತಿಥಿಗಳಾಗಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಜಿ.ಎಲ್.ಹೆಗಡೆ ಭಾಗವಹಿಸಲಿದ್ದಾರೆ. ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಗಿರಿಧರ ಕಜೆ ಅಧ್ಯಕ್ಷತೆ ವಹಿಸಲಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಯುವ ಸಾಧಕರಿಗೆ ‘ಪಲ್ಲವ ಪುರಸ್ಕಾರ’ ಪ್ರದಾನವೂ ನಡೆಯಲಿದೆ. ಪ್ರಕಾಶ್‌ ಹೆಗಡೆ ಕಲ್ಲಾರೆಮನೆ ಮತ್ತು ಬಳಗದಿಂದ ‘ವೇಣು ನಿನಾದ’ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಹವ್ಯಕ ವಿಶೇಷ ಪ್ರಶಸ್ತಿ ಪುರಸ್ಕೃತರು:ಗಜಾನನ ಶರ್ಮ (ಹವ್ಯಕ ವಿಭೂಷಣ),ಉದಯಕುಮಾರ್ ನೂಜಿ,ಬಳ್ಕೂರು ಕೃಷ್ಣಯಾಜಿ,ನಾರಾಯಣ ದಾಸ (ಹವ್ಯಕ ಭೂಷಣ), ಅಶ್ವಿನಿ ಭಟ್, ರಾಜಾರಾಮ ಸಿ.ಜಿ., ಅಶ್ವಿನಿಕುಮಾರ್ ಭಟ್ (ಹವ್ಯಕ ಶ್ರೀ),ತ್ರಿಯಂಬಕ ಗಣೇಶ ಹೆಗಡೆ (ಹವ್ಯಕ ಸೇವಾಶ್ರೀ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.