ADVERTISEMENT

ಹೆಡ್ ಕಾನ್‌ಸ್ಟೆಬಲ್ ಶ್ರೀನಿವಾಸ್‌ ನಿಧನ: ಮಿಡಿದ ಪೊಲೀಸರ ಮನ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2018, 19:10 IST
Last Updated 4 ಡಿಸೆಂಬರ್ 2018, 19:10 IST
ಜ್ಞಾನಭಾರತಿ ಠಾಣೆ ಪೊಲೀಸರು, ಶ್ರೀನಿವಾಸ್ ಅವರ ಪತ್ನಿಗೆ ಹಣ ವಿತರಿಸಿದರು
ಜ್ಞಾನಭಾರತಿ ಠಾಣೆ ಪೊಲೀಸರು, ಶ್ರೀನಿವಾಸ್ ಅವರ ಪತ್ನಿಗೆ ಹಣ ವಿತರಿಸಿದರು   

ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ ನಿಧನರಾದ ಜ್ಞಾನಭಾರತಿ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಶ್ರೀನಿವಾಸ್‌ ಅವರ ಕುಟುಂಬಕ್ಕೆ, ಠಾಣೆಯ ಪೊಲೀಸರೇ ₹1 ಲಕ್ಷ ಸಂಗ್ರಹಿಸಿ ಕೊಟ್ಟಿದ್ದಾರೆ.

ಶ್ರೀನಿವಾಸ್‌, ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಸಾವಿನಿಂದಾಗಿ ಕುಟುಂಬವು ಆರ್ಥಿಕ ತೊಂದರೆ ಅನುಭವಿಸುತ್ತಿತ್ತು. ಅವರ ಕಷ್ಟಕ್ಕೆ ಮಿಡಿದ ಪೊಲೀಸರು, ತಮ್ಮ ಸಹೋದ್ಯೋಗಿ ಕುಟುಂಬಕ್ಕೆ ನೆರವಾಗಲೆಂದು ಸ್ವಯಂಪ್ರೇರಿತರಾಗಿ ಹಣ ಸಂಗ್ರಹಿಸಿ ನೀಡಿದ್ದಾರೆ.

ಶ್ರೀನಿವಾಸ್‌ ಅವರ ಪತ್ನಿ ಹಾಗೂ ಮಗನನ್ನು ಮಂಗಳವಾರ ಠಾಣೆಗೆ ಆಹ್ವಾನಿಸಿದ್ದ ಪೊಲೀಸರು, ಅವರ ಕೈಗೆ ಹಣ ಕೊಟ್ಟಿದ್ದಾರೆ. ಅದನ್ನು ಸ್ವೀಕರಿಸಿದ ಪತ್ನಿ ಹಾಗೂ ಮಗ, ಪೊಲೀಸರಿಗೆ ಧನ್ಯವಾದ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.