ADVERTISEMENT

ಕಿದ್ವಾಯಿಯಲ್ಲಿ ‘ಆರೋಗ್ಯ’ ವನ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 20:06 IST
Last Updated 4 ಅಕ್ಟೋಬರ್ 2019, 20:06 IST
ಸಂಸ್ಥೆಯ ಆವರಣದಲ್ಲಿ ಮೆಂಡ ಫೌಂಡೇಷನ್‌ ಅಧ್ಯಕ್ಷ ಅರ್ಜುನ್‌ ಮೆಂಡಾ ಹಾಗೂ ಡಾ.ಸಿ. ರಾಮಚಂದ್ರ ಅವರು ಗಿಡ ನೆಟ್ಟು ನೀರುಣಿಸಿದರು –ಪ್ರಜಾವಾಣಿ ಚಿತ್ರ
ಸಂಸ್ಥೆಯ ಆವರಣದಲ್ಲಿ ಮೆಂಡ ಫೌಂಡೇಷನ್‌ ಅಧ್ಯಕ್ಷ ಅರ್ಜುನ್‌ ಮೆಂಡಾ ಹಾಗೂ ಡಾ.ಸಿ. ರಾಮಚಂದ್ರ ಅವರು ಗಿಡ ನೆಟ್ಟು ನೀರುಣಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕ್ಯಾನ್ಸರ್ ರೋಗಿಗಳಿಗೆ ಆಸ್ಪತ್ರೆಯ ಆವರಣದಲ್ಲಿ ಆಹ್ಲಾದಕರ ವಾತಾವರಣ ಕಲ್ಪಿಸಲು 14 ಸಾವಿರ ಸಸಿಗಳನ್ನು ನೆಡಲು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಜತೆಗೆ ಬೆಂಗಳೂರು ಮಿಡ್‌ಟೌನ್‌ ರೋಟರಿ ಕ್ಲಬ್‌ ಕೈಜೋಡಿಸಿದೆ. ಕಿದ್ವಾಯಿ ಆವರಣದಲ್ಲಿ ಉದ್ಯಾನ ನಿರ್ಮಾಣ ಮಾಡುವ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

‘ಮೊದಲ ಹಂತದಲ್ಲಿ 4 ಸಾವಿರ ಸಸಿ ಬೆಳೆಸಲಾಗಿದೆ. ಔಷಧ ಗಿಡಗಳು, ಹೂವಿನ ಗಿಡಗಳು, ಮರದ ಜಾತಿಯ ಗಿಡಗಳನ್ನು ಬೆಳೆಸಲಾಗುವುದು’ ಎಂದುಇಂಡಸ್‌ ಹರ್ಬ್ಸ್‌ನ ಟಿ.ಸಿ. ರವೀಂದ್ರ ತಿಳಿಸಿದರು.

‘ಪ್ರತ್ಯೇಕ ಚಿಟ್ಟೆ ಉದ್ಯಾನವನ್ನು ಶಾಂತಿಧಾಮದ ಬಳಿ ಮಾಡಲಾಗುತ್ತದೆ. ಚಿಟ್ಟೆಗಳನ್ನು ಆಕರ್ಷಿಸುವ ಗಿಡಗಳನ್ನು4 ಸಾವಿರ ಚದರ ಅಡಿಪ್ರದೇಶದಲ್ಲಿ ನೆಡಲಾಗುವುದು’ ಎಂದು ತಿಳಿಸಿದರು.

ADVERTISEMENT

ಸಂಸ್ಥೆಯ ನಿರ್ದೇಶಕ ಡಾ.ಸಿ.ರಾಮಚಂದ್ರ,‘ರೋಗಿಗಳ ಆತ್ಮಸ್ಥೈರ್ಯ ಹೆಚ್ಚಿಸಲು ಉದ್ಯಾನಗಳು ಸಹಕಾರಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.