ADVERTISEMENT

‘ಕೋರ್ಟ್‌ ಆದೇಶ– ಅಭಿವೃದ್ಧಿ ಕಾರ್ಯ ಚುರುಕು’

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 19:33 IST
Last Updated 29 ಜುಲೈ 2021, 19:33 IST
ಬಾಗಲಗುಂಟೆ ವಾರ್ಡ್‌ನಲ್ಲಿ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಶಾಸಕ ಆರ್. ಮಂಜುನಾಥ್ ಚಾಲನೆ ನೀಡಿದರು. ಹಿರಿಯ ಮುಖಂಡರಾದ ಗುಂಡಪ್ಪ, ತಮ್ಮಣ್ಣ, ಹನುಮಂತರಾಜು, ರಾಜಣ್ಣ, ಚಂದ್ರಣ್ಣ, ಮುದ್ದಹನುಮೇಗೌಡ, ಸೀತಾ ಮರಿಗೌಡ, ಸಿದ್ಧರಾಜು, ಜಯಣ್ಣ, ಸದಾಶಿವ, ರಾಣಿ ಪ್ರತಾಪ್ ಹಾಜರಿದ್ದರು.
ಬಾಗಲಗುಂಟೆ ವಾರ್ಡ್‌ನಲ್ಲಿ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಶಾಸಕ ಆರ್. ಮಂಜುನಾಥ್ ಚಾಲನೆ ನೀಡಿದರು. ಹಿರಿಯ ಮುಖಂಡರಾದ ಗುಂಡಪ್ಪ, ತಮ್ಮಣ್ಣ, ಹನುಮಂತರಾಜು, ರಾಜಣ್ಣ, ಚಂದ್ರಣ್ಣ, ಮುದ್ದಹನುಮೇಗೌಡ, ಸೀತಾ ಮರಿಗೌಡ, ಸಿದ್ಧರಾಜು, ಜಯಣ್ಣ, ಸದಾಶಿವ, ರಾಣಿ ಪ್ರತಾಪ್ ಹಾಜರಿದ್ದರು.   

ಬೆಂಗಳೂರು: ‘ಜೆಡಿಎಸ್‌–ಕಾಂಗ್ರೆಸ್‌ ನೇತೃತ್ವದ ಸರ್ಕಾರವು ಕ್ಷೇತ್ರದ ಅಭಿವೃದ್ಧಿಗೆ ನೀಡಿದ್ದ ಹಣವನ್ನು, ಬಿಜೆಪಿ ನೇತೃತ್ವದ ಸರ್ಕಾರ ತಡೆಹಿಡಿದಿತ್ತು. ₹110.75 ಕೋಟಿ ಅನುದಾನವನ್ನು ಒಂದು ತಿಂಗಳೊಳಗೆ ಬಿಡುಗಡೆ ಮಾಡಬೇಕು ಎಂದು ಹೈಕೋರ್ಟ್‌ ಬುಧವಾರ ಆದೇಶ ನೀಡಿದ್ದು, ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಚುರುಕು ಪಡೆಯಲಿವೆ’ ಎಂದು ದಾಸರಹಳ್ಳಿ ಶಾಸಕ ಆರ್. ಮಂಜುನಾಥ್‌ ಹೇಳಿದರು.

ಬಾಗಲಗುಂಟೆ ವಾರ್ಡ್‌ನ ಕಿರ್ಲೋಸ್ಕರ್ ಬಡಾವಣೆ, ಸಿದ್ದೇಶ್ವರ ಬಡಾವಣೆ, ಸೌಂದರ್ಯ ಬಡಾವಣೆ, ಭೈರವೇಶ್ವರನಗರ ಭಾಗದ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದ್ದರೂ, ಕಾಣದ ಕೈಗಳು ಅನುದಾನವನ್ನು ತಡೆ ಹಿಡಿಯುವ ಕೆಲಸವನ್ನು ನಿರಂತರವಾಗಿ ಮಾಡಿದ್ದವು. ಆದರೂ, ನನ್ನ ಆತ್ಮಸ್ಥೈರ್ಯ ಕುಂದಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತೇನೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.