ADVERTISEMENT

‘ಬಾಹ್ಯಾಕಾಶ ಉದ್ಯೋಗಕ್ಕೆ ಬನ್ನಿ’

​ಪ್ರಜಾವಾಣಿ ವಾರ್ತೆ
Published 10 ಮೇ 2019, 20:30 IST
Last Updated 10 ಮೇ 2019, 20:30 IST
ವಿಜ್ಞಾನಿ ಕಿರಣ್ ಕುಮಾರ್ ಅವರನ್ನು ಪ್ರಾಜೆಕ್ಟ್ ಎಕ್ಸ್‌ಪೋ ಸಂಚಾಲಕ ಶಶಿಧರ್, ಶಿಕ್ಷಣ ಸಂಸ್ಥೆ ನಿರ್ದೇಶಕ ಅಮರನಾಥ್, ಪ್ರಾಂಶುಪಾಲ ಪ್ರವೀಣ್ ಗೌಡ,ಎಕ್ಸ್‌ಪೋ ಸಹ ಸಂಚಾಲಕ ಮಂಜುನಾಥ್ ಅವರು ಸನ್ಮಾನಿಸಿದರು.
ವಿಜ್ಞಾನಿ ಕಿರಣ್ ಕುಮಾರ್ ಅವರನ್ನು ಪ್ರಾಜೆಕ್ಟ್ ಎಕ್ಸ್‌ಪೋ ಸಂಚಾಲಕ ಶಶಿಧರ್, ಶಿಕ್ಷಣ ಸಂಸ್ಥೆ ನಿರ್ದೇಶಕ ಅಮರನಾಥ್, ಪ್ರಾಂಶುಪಾಲ ಪ್ರವೀಣ್ ಗೌಡ,ಎಕ್ಸ್‌ಪೋ ಸಹ ಸಂಚಾಲಕ ಮಂಜುನಾಥ್ ಅವರು ಸನ್ಮಾನಿಸಿದರು.   

ಬೊಮ್ಮನಹಳ್ಳಿ: ‘ಮಾನವ ರಹಿತ ಬಾಹ್ಯಾಕಾಶ ಯೋಜನೆಗಳನ್ನು ಕೈಗೊಂಡು ಯಶಸ್ವಿಯಾಗಿರುವ ಇಸ್ರೊ, ಮಾನವ ಸಹಿತ ಬಾಹ್ಯಾಕಾಶ ಉಡಾವಣೆಗೆ ಸಿದ್ಧವಾಗುತ್ತಿದೆ’ ಎಂದು ವಿಜ್ಞಾನಿ ಎ.ಎಸ್.ಕಿರಣ್‌ ಕುಮಾರ್‌ ಹೇಳಿದರು.

ಬೊಮ್ಮನಹಳ್ಳಿ ಆಕ್ಸ್‌ಫರ್ಡ್‌ ಎಂಜಿನಿಯರಿಂಗ್ ಕಾಲೇಜು ಆಯೋಜಿಸಿದ್ದರಾಷ್ಟ್ರೀಯ ಮಟ್ಟದ ‘ಪ್ರಾಜೆಕ್ಟ್ ಎಕ್ಸ್‌ಪೋ- 2019’ ಉದ್ಘಾಟಿಸಿ ಅವರು ಮಾತನಾಡಿದರು.

‘ಬಾಹ್ಯಾಕಾಶ ಯೋಜನೆಗಳ ಅನುಷ್ಠಾನ ನಿಂತಿಲ್ಲ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವೇಗ ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಆರ್ಥಿಕ ಹೊರೆಯಾಗದಂತೆ, ಬಾಹ್ಯಾಕಾಶ ಯೋಜನಾ ವೆಚ್ಚ ತಗ್ಗಿಸಿ, ಇರುವ ಸಂಪನ್ಮೂಲದಲ್ಲೇ ಹೊಸ ಯೋಜನೆಗಳನ್ನು ಕೈಗೊಳ್ಳುವ ಪ್ರಯತ್ನವೂ ನಡೆಯುತ್ತಿದೆ’ ಎಂದರು.

ADVERTISEMENT

‘ಬಾಹ್ಯಾಕಾಶ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಬಾಹ್ಯಾಕಾಶ ಅಧ್ಯಯನದತ್ತ ಮುಖ ಮಾಡಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.

ಕೃಷಿ, ಆರೋಗ್ಯ, ಶಿಕ್ಷಣ, ಮಿಲಿಟರಿ ಹಾಗೂ ರೋಬೊಟ್‌ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿವಿಧ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶನ ಮಾಡಿದರು.

ಪ್ರಾಜೆಕ್ಟ್ ಎಕ್ಸ್‌ಪೋ ಮತ್ತು ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ 200 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.