ADVERTISEMENT

ಐವಿಎಫ್‌ನಿಂದ ಕನಸು ಸಾಕಾರ: ಡಾ. ಸ್ನೇಹಾ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 21:12 IST
Last Updated 24 ಜುಲೈ 2025, 21:12 IST
ಡಾ. ಸ್ನೇಹಾ ಶೆಟ್ಟಿ
ಡಾ. ಸ್ನೇಹಾ ಶೆಟ್ಟಿ   

ಬೆಂಗಳೂರು: ‘ಬಂಜೆತನ ಸಮಸ್ಯೆಗೆ ಐವಿಎಫ್ ತಂತ್ರಜ್ಞಾನ ಪರಿಹಾರವಾಗಿದ್ದು, ಈ ತಂತ್ರಜ್ಞಾನದ ನೆರವಿನಿಂದ ಅನೇಕ ದಂಪತಿಗಳಿಗೆ ಮಗು ಪಡೆಯುವ ಕನಸು ಸಾಕಾರವಾಗಿದೆ’ ಎಂದು ಎಚ್‌ಎಸ್‌ಆರ್ ಲೇಔಟ್ ಮತ್ತು ವೈಟ್‌ಫೀಲ್ಡ್‌ನಲ್ಲಿರುವ ವೃಕ್ಷ್ ಫರ್ಟಿಲಿಟಿ ಕೇಂದ್ರದ ಕ್ಲಿನಿಕಲ್ ನಿರ್ದೇಶಕಿ ಡಾ. ಸ್ನೇಹಾ ಶೆಟ್ಟಿ ತಿಳಿಸಿದ್ದಾರೆ. 

‘ಐವಿಎಫ್‌ ತಂತ್ರಜ್ಞಾನವು ಭರವಸೆ, ವಿಜ್ಞಾನ ಮತ್ತು ದೃಢ ಸಂಕಲ್ಪದ ಸಂಯೋಜನೆಯಾಗಿದೆ. ಫಲವತ್ತತೆ ಚಿಕಿತ್ಸಾ ವಿಧಾನದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಹಿಂದೆ ಅಸಾಧ್ಯವಾದದ್ದು ಈಗ ವಿಜ್ಞಾನ ಮತ್ತು ತಂತ್ರಜ್ಞಾನದ ನೆರವಿನಿಂದ ಸಾಧ್ಯವಾಗುತ್ತಿದೆ. ನಮ್ಮ ಕೇಂದ್ರದಲ್ಲಿ ಪ್ರತಿನಿತ್ಯವೂ ಈ ಕ್ಷೇತ್ರದಲ್ಲಿ ಅದ್ಭುತ ಫಲಿತಾಂಶವನ್ನು ನೋಡುತ್ತಿದ್ದೇವೆ’ ಎಂದು ಹೇಳಿದ್ದಾರೆ. 

‘ಪ್ರತಿಯೊಂದು ಐವಿಎಫ್ ಪ್ರಕ್ರಿಯೆ ಹಿಂದೆ ಧೈರ್ಯ, ಪ್ರೀತಿ ಮತ್ತು ನಂಬಿಕೆಯ ಕಥೆಯಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.