ADVERTISEMENT

‘ತುಂತುರು ಇಲ್ಲಿ ನೀರ ಹಾಡು’ ಕಲ್ಯಾಣ್‌ ಗೀತ ಮಾಧುರ್ಯ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2022, 11:07 IST
Last Updated 20 ನವೆಂಬರ್ 2022, 11:07 IST
ಓಜಸ್‌ ಸ್ವಸ್ತಿ ಈವೆಂಟ್ಸ್‌ನ ಉದ್ಘಾಟನೆಯ ಅಂಗವಾಗಿ ಹಮ್ಮಿಕೊಂಡ ‘ತುಂತುರು ಅಲ್ಲಿ ನೀರ ಹಾಡು’ ಕಾರ್ಯಕ್ರಮದಲ್ಲಿ ಗಾಯಕ ಜಯಸಿಂಹ ಮತ್ತು ಅವರ ತಂಡದವರು ಕನ್ನಡ ಚಿತ್ರಗೀತೆಗಳನ್ನು ಹಾಡಿದರು
ಓಜಸ್‌ ಸ್ವಸ್ತಿ ಈವೆಂಟ್ಸ್‌ನ ಉದ್ಘಾಟನೆಯ ಅಂಗವಾಗಿ ಹಮ್ಮಿಕೊಂಡ ‘ತುಂತುರು ಅಲ್ಲಿ ನೀರ ಹಾಡು’ ಕಾರ್ಯಕ್ರಮದಲ್ಲಿ ಗಾಯಕ ಜಯಸಿಂಹ ಮತ್ತು ಅವರ ತಂಡದವರು ಕನ್ನಡ ಚಿತ್ರಗೀತೆಗಳನ್ನು ಹಾಡಿದರು   

ಬೆಂಗಳೂರು: ಗೀತ ರಚನೆಕಾರ, ಸಂಗೀತ ನಿರ್ದೇಶಕ ಕೆ. ಕಲ್ಯಾಣ್‌ ಅವರ ಗೀತೆಗಳ ಗಾಯನದ ವಿಶೇಷ ಕಾರ್ಯಕ್ರಮ ‘ತುಂತುರು ಇಲ್ಲಿ ನೀರ ಹಾಡು’ ಶನಿವಾರ ಸಂಜೆ ಬೆಂಗಳೂರಿನ ಬಸವನಗುಡಿ ಎನ್‌.ಆರ್‌.ಕಾಲೊನಿಯ ಡಾ.ಅಶ್ವತ್ಥ್‌ ಕಲಾಭವನದಲ್ಲಿ ನಡೆಯಿತು.

ಓಜಸ್ ಸ್ವಸ್ತಿ ಈವೆಂಟ್ಸ್‌ ಸಂಸ್ಥೆಯ ಉದ್ಘಾಟನೆಯ ಅಂಗವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಕಲ್ಯಾಣ್‌ ಅವರನ್ನು ಸನ್ಮಾನಿಸಲಾಯಿತು. ಕಲ್ಯಾಣ್‌ ಅವರ ರಚನೆ, ಸಂಗೀತ ನಿರ್ದೇಶನದ ಗೀತೆಗಳನ್ನು ಗಾಯಕರಾದ ಜಯಸಿಂಹಮತ್ತು ತಂಡದವರು ಹಾಡಿದರು. ಸಂಗೀತ ನಿರ್ದೇಶಕ ವಿ.ಮನೋಹರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT