ADVERTISEMENT

ಕನಕಪುರ ರಸ್ತೆಯಲ್ಲಿ ‘ಕನ್ನಡ ಕಂಕಣ’

ಕನಕಪುರ ರಸ್ತೆ ಕನ್ನಡ ಬಳಗದ ಆಯೋಜನೆ: ಫೆ. 20ರಂದು ಕನ್ನಡದ ಪ್ರಮಾಣ ವಚನ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 11:57 IST
Last Updated 17 ಫೆಬ್ರುವರಿ 2021, 11:57 IST
ಕನ್ನಡ ಕಂಕಣ ಕಾರ್ಯಕ್ರಮದ ಪೋಸ್ಟರ್‌
ಕನ್ನಡ ಕಂಕಣ ಕಾರ್ಯಕ್ರಮದ ಪೋಸ್ಟರ್‌   

ಬೆಂಗಳೂರು: ಕನಕಪುರ ರಸ್ತೆ ಕನ್ನಡ ಬಳಗದ ವತಿಯಿಂದ ಪ್ರತಿ ತಿಂಗಳು ನಡೆಯುವ ‘ಕನ್ನಡ ಜಾತ್ರೆ’ ಕಾರ್ಯಕ್ರಮದ ಅಂಗವಾಗಿ ಈ ತಿಂಗಳು ‘ಕನ್ನಡ ಕಂಕಣ’ ಕಾರ್ಯಕ್ರಮ ಫೆ. 20ರಂದು ಸಂಜೆ 5ಕ್ಕೆ ನಗರದ ಜರಗನಹಳ್ಳಿ ಉದ್ಯಾನದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಕನ್ನಡದ ಹೋರಾಟಗಾರ ರಾ.ನಂ.ಚಂದ್ರಶೇಖರ್ ಮತ್ತು ಹಿರಿಯ ಸಾಹಿತಿ ಜರಗನಹಳ್ಳಿ ಶಿವಶಂಕರ್ ಚಾಲನೆ ನೀಡಲಿದ್ದಾರೆ.

ಮಂಜುನಾಥ ಹಾಲುವಾಗಿಲು ಈ ಕಾರ್ಯಕ್ರಮದ ಪರಿಕಲ್ಪನೆ ರೂಪಿಸಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕಿ ಭಾರ್ಗವಿ ಕನ್ನಡನಾಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.