ADVERTISEMENT

ಕರಗ: ಮುನೇಶ್ವರಸ್ವಾಮಿಗೆ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 19:42 IST
Last Updated 14 ಏಪ್ರಿಲ್ 2019, 19:42 IST
ಕರಗ ಮಹೋತ್ಸವದ ಅಂಗವಾಗಿ ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ದೀಪಾಲಂಕಾರ ಮಾಡಲಾಗಿದೆ
ಕರಗ ಮಹೋತ್ಸವದ ಅಂಗವಾಗಿ ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ದೀಪಾಲಂಕಾರ ಮಾಡಲಾಗಿದೆ   

ಬೆಂಗಳೂರು: ಕರಗ ಶಕ್ತ್ಯೋತ್ಸವದ ಪ್ರಯುಕ್ತ ಲಾಲ್‌ಬಾಗ್‌ ರಸ್ತೆ 3ನೇ ಅಡ್ಡರಸ್ತೆಯ ಮುನೇಶ್ವರಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ವಿಶೇಷ ಪೂಜೆ ನೆರವೇರಿಸಲಾಯಿತು.

ಕರಗದ ಪೂಜಾರಿ ಮನು ಹಾಗೂ ಅವರ ಸಂಗಡಿಗರಾದ ವೀರಕುಮಾರರು ಪೂಜೆ ಬಳಿಕ, ಸಂಪಂಗಿ
ರಾಮನಗರದಲ್ಲಿನ ಆನೇಗೌಡರ ಮನೆಗೆ ಭೇಟಿ ನೀಡಿ ಸೇವೆಯನ್ನು ಸ್ವೀಕರಿಸಿದರು. ಬಳಿಕ ಹಸಿ ಕರಗ ನಡೆಯುವ ಕುಂಟೆಗೆ ಬಂದರು. ಈ ಚಟುವಟಿಕೆಗಳ ಮೂಲಕ ದಿನದ ಧಾರ್ಮಿಕ ವಿಧಿ–ವಿಧಾನಗಳು ಮುಕ್ತಾಯಗೊಂಡವು.

ಏ.15ರಂದು ಗವಿಪುರ ಗುಟ್ಟಹಳ್ಳಿಯಲ್ಲಿ ಇರುವ ಜಲಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಧ್ಯಾಹ್ನ 12.30ಕ್ಕೆ ವಿಶೇಷ ಪೂಜೆ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.