ADVERTISEMENT

ಬೆಂಗಳೂರು: ಕಾವಿ ಚಿತ್ರ ಕಲಾ ಪ್ರದರ್ಶನಕ್ಕೆ ಚಾಲನೆ

ಚಿತ್ರಕಲಾ ಪರಿಷತ್ತಿನಲ್ಲಿ ನ.17ರವರೆಗೂ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 16:06 IST
Last Updated 9 ನವೆಂಬರ್ 2024, 16:06 IST
<div class="paragraphs"><p>ಭಾಸ ಗ್ಯಾಲರಿ ಆ್ಯಂಡ್ ಸ್ಟುಡಿಯೊ ಮತ್ತು ಕಾವಿ ಆರ್ಟ್ ಫೌಂಡೇಷನ್ ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿರುವ ‘ಕಾವಿ ಕೆಲಿಡೋಸ್ಕೋಪ್’ ಕಲಾ ಪ್ರದರ್ಶನಕ್ಕೆ ಶನಿವಾರ ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್ ಚಾಲನೆ ನೀಡಿದರು. </p></div>

ಭಾಸ ಗ್ಯಾಲರಿ ಆ್ಯಂಡ್ ಸ್ಟುಡಿಯೊ ಮತ್ತು ಕಾವಿ ಆರ್ಟ್ ಫೌಂಡೇಷನ್ ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿರುವ ‘ಕಾವಿ ಕೆಲಿಡೋಸ್ಕೋಪ್’ ಕಲಾ ಪ್ರದರ್ಶನಕ್ಕೆ ಶನಿವಾರ ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್ ಚಾಲನೆ ನೀಡಿದರು.

   

ಬೆಂಗಳೂರು: ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಶನಿವಾರ ಆರಂಭವಾದ ಉಡುಪಿಯ ಚಿತ್ರ ಕಲಾವಿದ ಜನಾರ್ದನ ರಾವ್ ಹಾವಂಜೆ ಅವರ ‘ಕಾವಿ ಚಿತ್ರ ಕಲಾ ಪ್ರದರ್ಶನ’ಕ್ಕೆ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷ ಪ.ಸ.ಕುಮಾರ್ ಚಾಲನೆ ನೀಡಿದರು.

ಕಾವಿ ಆರ್ಟ್ ಫೌಂಡೇಷನ್, ಹಾಗೂ ಭಾಸಾ ಗ್ಯಾಲರಿ ಮತ್ತು ಸ್ಟುಡಿಯೊ ಸಹಯೋಗದಲ್ಲಿ ಪ್ರದರ್ಶನ ಆಯೋಜಿಸಲಾಗಿದೆ. 'ಕಾವಿ ಕೆಲಡೋಸ್ಕೋಪ್' ಶೀರ್ಷಿಕೆಯಡಿ ‌ಏಕವ್ಯಕ್ತಿ ಕಲಾ ಪ್ರದರ್ಶನ ನಡೆಯುತ್ತಿದೆ. ನವೆಂಬರ್ 17ರವರೆಗೂ ಚಿತ್ರ ಪ್ರದರ್ಶನ ನಡೆಯುತ್ತದೆ.

ADVERTISEMENT

ಪ್ರದರ್ಶನದಲ್ಲಿ ಸಾಂಪ್ರದಾಯಿಕ, ಜನಪದೀಯ ಶೈಲಿಯ ಜೊತೆಗೆ ಸಮಕಾಲೀನ ವಿಷಯಗಳ ಕುರಿತ ನೂರಕ್ಕೂ ಹೆಚ್ಚು ಚಿತ್ರಗಳಿವೆ. ಇದು ಕಾವಿ ಕಲೆಯನ್ನು ಸಮಕಾಲೀನ ಮಾಧ್ಯಮಗಳಲ್ಲಿ ಬಳಸುವ, ಅದರ ಸಾಧ್ಯತೆಗಳನ್ನು ಎತ್ತಿ ಹಿಡಿಯುವ ಪ್ರಯೋಗಾತ್ಮಕ ಪ್ರದರ್ಶನವಾಗಿದೆ.

ಕಾವಿ ಕಲೆ ಕರ್ನಾಟಕದ ಕರಾವಳಿ ಭಾಗದ ವಿಶಿಷ್ಟ ಚಿತ್ರ ಕಲಾ ಪ್ರಕಾರ. 13–14ನೇ ಶತಮಾನದ ಪಾರಂಪರಿಕ ಕಲೆಯಾಗಿರುವ ‘ಕಾವಿ ಚಿತ್ರಕಲೆ’ 1950ರ ನಂತರ ಅಳಿವಿನಂಚು ತಲುಪಿದೆ. ಈ ಕಲೆ ಉಳಿವಿಗಾಗಿ 22 ವರ್ಷಗಳಿಂದ ಅವಿರತವಾಗಿ ಶ್ರಮಿಸುತ್ತಿದ್ದಾರೆ ಉಡುಪಿಯ ಚಿತ್ರ ಕಲಾವಿದ ಜನಾರ್ದನ ರಾವ್ ಹಾವಂಜೆ. ಅವರು ಸದ್ಯ 800ಕ್ಕೂ ಹೆಚ್ಚು ಕಾವಿ ಚಿತ್ರಗಳಿರುವ ನೆಲೆಗಳನ್ನು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.