ADVERTISEMENT

ನರೇಂದ್ರ ನಾಯಕ್ ಸೇರಿ ಆರು ಮಂದಿಗೆ ‘ಕಿರಂ ನಾಗರಾಜ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2023, 0:30 IST
Last Updated 3 ಆಗಸ್ಟ್ 2023, 0:30 IST
ನರೇಂದ್ರ ನಾಯಕ್
ನರೇಂದ್ರ ನಾಯಕ್   

ಬೆಂಗಳೂರು: ಜನಸಂಸ್ಕೃತಿ ಪ್ರತಿಷ್ಠಾನ ನೀಡುವ 2023ನೇ ಸಾಲಿನ ‘ಕಿರಂ ನಾಗರಾಜ ಪ್ರಶಸ್ತಿ’ಗೆ ವಿಚಾರವಾದಿ ನರೇಂದ್ರ ನಾಯಕ್ ಸೇರಿ ಆರು ಮಂದಿ ಆಯ್ಕೆಯಾಗಿದ್ದಾರೆ. 

ಚಿತ್ರ ಕಲಾವಿದೆ ಸಿ.ಎಸ್. ನಿರ್ಮಲ ಕುಮಾರಿ, ಸಾಹಿತಿಗಳಾದ ಸುಬ್ಬು ಹೊಲೆಯಾರ್, ನಾಗತಿಹಳ್ಳಿ ರಮೇಶ್, ಪತ್ರಕರ್ತ ಆರ್.ಜಿ.ಹಳ್ಳಿ ನಾಗರಾಜ್ ಹಾಗೂ ಸಾಹಿತ್ಯ ಪರಿಚಾರಕ ನಾಗೇಶ್ ದಸೂಡಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಇದೇ 7ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರದಲ್ಲಿ ‘ಕಾಡುವ ಕಿರಂ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಮಾಲ್ಗುಡಿ ತಿಳಿಸಿದ್ದಾರೆ. 

ADVERTISEMENT
ಸಿ.ಎಸ್. ನಿರ್ಮಲ ಕುಮಾರಿ
ಸುಬ್ಬು ಹೊಲೆಯಾರ್
ಆರ್.ಜಿ.ಹಳ್ಳಿ ನಾಗರಾಜ್
ನಾಗತಿಹಳ್ಳಿ ರಮೇಶ್
ನಾಗೇಶ್ ದಸೂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.