ADVERTISEMENT

ಅಂಬಾನಿ ಆಸ್ತಿ ಮೌಲ್ಯ ಹೆಚ್ಚಿಸಿದ್ದೇ ಬಿಜೆಪಿ ಸಾಧನೆ: ಕೃಷ್ಣಬೈರೇಗೌಡ ಟೀಕೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 19:07 IST
Last Updated 28 ಡಿಸೆಂಬರ್ 2021, 19:07 IST
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ನೂತನ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್‌ ಮತ್ತು ಎಸ್.ರವಿ ಅವರನ್ನು ಶಾಸಕ ಕೃಷ್ಣಬೈರೇಗೌಡ ಸನ್ಮಾನಿಸಿದರು. ಮಾಜಿ ಉಪಮೇಯರ್ ಎನ್.ಇಂದಿರಾ, ಮಾಜಿ ಸದಸ್ಯರಾದ ಪಿ.ವಿ.ಮಂಜುನಾಥಬಾಬು, ವಿ.ವಿ.ಪಾರ್ತಿಬರಾಜನ್, ಮುಖಂಡರಾದ ಎಂ.ಜಯಗೋಪಾಲಗೌಡ, ಎನ್.ಎನ್.ಶ್ರೀನಿವಾಸಯ್ಯ, ಕೆ.ಅಶೋಕನ್, ದಾನೇಗೌಡ, ಹನುಮಂತೇಗೌಡ, ಡಿ.ಬಿ.ಸುರೇಶ್ ಗೌಡ, ಕೋಗಿಲು ಎಂ.ವೆಂಕಟೇಶ್, ವಿ.ಹರಿ, ಟಿ.ಜಿ.ಚಂದ್ರು, ಆರ್.ಎಂ.ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ನೂತನ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್‌ ಮತ್ತು ಎಸ್.ರವಿ ಅವರನ್ನು ಶಾಸಕ ಕೃಷ್ಣಬೈರೇಗೌಡ ಸನ್ಮಾನಿಸಿದರು. ಮಾಜಿ ಉಪಮೇಯರ್ ಎನ್.ಇಂದಿರಾ, ಮಾಜಿ ಸದಸ್ಯರಾದ ಪಿ.ವಿ.ಮಂಜುನಾಥಬಾಬು, ವಿ.ವಿ.ಪಾರ್ತಿಬರಾಜನ್, ಮುಖಂಡರಾದ ಎಂ.ಜಯಗೋಪಾಲಗೌಡ, ಎನ್.ಎನ್.ಶ್ರೀನಿವಾಸಯ್ಯ, ಕೆ.ಅಶೋಕನ್, ದಾನೇಗೌಡ, ಹನುಮಂತೇಗೌಡ, ಡಿ.ಬಿ.ಸುರೇಶ್ ಗೌಡ, ಕೋಗಿಲು ಎಂ.ವೆಂಕಟೇಶ್, ವಿ.ಹರಿ, ಟಿ.ಜಿ.ಚಂದ್ರು, ಆರ್.ಎಂ.ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು   

ಯಲಹಂಕ: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಹಲವಾರು ನಾಯಕರು ತನು-ಮನ, ಧನವಲ್ಲದೆ ತಮ್ಮ ಪ್ರಾಣತ್ಯಾಗವನ್ನೂ ಮಾಡಿದ್ದಾರೆ. ಹತ್ತಾರುವರ್ಷ ಜೈಲುವಾಸ ಹಾಗೂ ಹೋರಾಟಮಾಡುವ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಕೃಷ್ಣಬೈರೇಗೌಡ ಹೇಳಿದರು.

ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ವತಿಯಿಂದ ಕಳ್ಳಿಪಾಳ್ಯ ಸಮೀಪದ ವೆಂಕಟೇಶ್ವರನಗರದಲ್ಲಿ ಅಯೋಜಿಸಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ, ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ, ನೂತನ ವಿಧಾನಪರಿಷತ್ ಸದಸ್ಯರಿಗೆ ಸನ್ಮಾನ ಹಾಗೂ ಮೇಕೆದಾಟು ಯೋಜನೆ ಪಾದಯಾತ್ರೆ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ನೆಹರೂ ಬಗ್ಗೆ ಸರಿಯಾಗಿ ತಿಳಿದುಕೊಳ್ಳದ ಬಿಜೆಪಿಯವರು ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಡೋಂಗಿ ರಾಜಕಾರಣ ಮಾಡುತ್ತಿದ್ದಾರೆ. ಶೇ 40ರಷ್ಟು ಕಮಿಷನ್ ಲಂಚ ಹೊಡೆಯಲು ಮಾತ್ರ ಅಧಿಕಾರ ಬೇಕಾಗಿದ್ದು, ಇವರ ಆಡಳಿತಾವಧಿಯಲ್ಲಿ ಅಂಬಾನಿ, ಅದಾನಿಯಂತವರ ಆಸ್ತಿಮೌಲ್ಯ ಹೆಚ್ಚುತ್ತಿದೆಯೇ ಹೊರತು, ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಇದೇ ಬಿಜೆಪಿಯವರ ಸಾಧನೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಮಳೆ, ನೆರೆ ಹಾವಳಿ ಸೇರಿದಂತೆ ಕೊರೊನಾದಿಂದ ಪ್ರಾಣಕಳೆದುಕೊಂಡವರಿಗೂ ಸರಿಯಾಗಿ ಪರಿಹಾರ ನೀಡಿಲ್ಲ. ಅಭಿವೃದ್ಧಿ ಮಾಡಲು ಇವರಿಗೆ ಸಮಯವಿಲ್ಲ; ಆದರೆ, ಎಲ್ಲದರಲ್ಲೂ ಲೂಟಿ ಹೊಡೆಯಲು ಪಣತೊಟ್ಟು ನಿಂತಿದ್ದಾರೆ. ಇಂತವರು ದೇಶಪ್ರೇಮದ ಬಗ್ಗೆ ಪಾಠ ಮಾಡುತ್ತಿರುವುದು ಹಾಸ್ಯಾಸ್ಪದ’ ಎಂದರು.

ವಿಧಾನಪರಿಷತ್ ನೂತನ ಸದಸ್ಯರಾದ ಎಸ್.ರವಿ ಮತ್ತು ಎಂ.ಎಲ್.ಅನಿಲ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.