ADVERTISEMENT

ರಾಜಧಾನಿ ತಲುಪಿದ ಸೈಕಲ್ ಜಾಥಾ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 21:00 IST
Last Updated 9 ಡಿಸೆಂಬರ್ 2018, 21:00 IST
ಜಾಥಾದಲ್ಲಿ ಪಾಲ್ಗೊಂಡ ಕೆಎಸ್‌ಆರ್‌ಪಿ ಮಹಿಳಾ ಸಿಬ್ಬಂದಿ
ಜಾಥಾದಲ್ಲಿ ಪಾಲ್ಗೊಂಡ ಕೆಎಸ್‌ಆರ್‌ಪಿ ಮಹಿಳಾ ಸಿಬ್ಬಂದಿ   

ಬೆಂಗಳೂರು: ‘ಮಹಿಳಾ ಸಬಲೀಕರಣ’ ಧ್ಯೇಯದೊಂದಿಗೆ ಬೆಳಗಾವಿಯಿಂದ ಹೊರಟಿದ್ದ ರಾಜ್ಯ ಪೊಲೀಸ್ ಮೀಸಲು ಪಡೆಯ (ಕೆಎಸ್‌ಆರ್‌ಪಿ) ಮಹಿಳಾ ಸಿಬ್ಬಂದಿಯ ‘ಸೈಕಲ್ ಜಾಥಾ’ ಭಾನುವಾರ ಬೆಂಗಳೂರಿನಲ್ಲಿ ಮುಕ್ತಾಯಗೊಂಡಿತು.

ಬಾಲ್ಯ ವಿವಾಹಕ್ಕೆ ತಡೆ, ಹೆಣ್ಣು ಮಕ್ಕಳಿಗೆ ಶಿಕ್ಷಣ, ಭ್ರೂಣ ಹತ್ಯೆಗೆ ವಿರೋಧ, ಶುಚಿತ್ವ ಹಾಗೂ ವರದಕ್ಷಿಣೆ ಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಎಡಿಜಿಪಿ ಭಾಸ್ಕರ್‌ರಾವ್‌ ನೇತೃತ್ವದಲ್ಲಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿಯಿಂದ ಬುಧವಾರ
(ಡಿ. 5ರಂದು) ಹೊರಟಿದ್ದ ಜಾಥಾ ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ಮಾರ್ಗವಾಗಿ
545 ಕಿ.ಮೀ ಸಂಚರಿಸಿತು.

ಭಾನುವಾರ ಮಧ್ಯಾಹ್ನ ವಿಧಾನಸೌಧಕ್ಕೆ ಬಂದ 95 ಮಹಿಳಾ ಸಿಬ್ಬಂದಿಯ ತಂಡವನ್ನು ಐಪಿಎಸ್ ಅಧಿಕಾರಿಗಳಾದ ಎ.ಎಂ.ಪ್ರಸಾದ್, ಮಾಲಿನಿ ಕೃಷ್ಣಮೂರ್ತಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ, ಮೇಯರ್ ಗಂಗಾಂಬಿಕೆ ಸ್ವಾಗತಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.