ಬೆಂಗಳೂರು: ನಿಗದಿಗಿಂತ ಹೆಚ್ಚು ದರ ಪಡೆಯುತ್ತಿದ್ದ ತಮಿಳುನಾಡಿನ ತಿರುಕೋಯಿಲೂರಿನ ಕೆಎಸ್ಆರ್ಟಿಸಿ ಟಿಕೆಟ್ ಬುಕ್ಕಿಂಗ್ನ ಖಾಸಗಿ ಏಜೆನ್ಸಿಯ ಕಾರ್ಯ ಸ್ಥಗಿತಗೊಳಿಸಲಾಗಿದೆ.
ಕೆಎಸ್ಆರ್ಟಿಸಿ ಬಸ್ಗಳ ಟಿಕೆಟ್ನ ನಿಗದಿತ ದರದ ಬದಲು ₹ 50ರಿಂದ ₹70ರಷ್ಟು ಅಧಿಕ ವಸೂಲು ಮಾಡುತ್ತಿದ್ದ ಪ್ರಕರಣವನ್ನು ನಿಗಮದ ತನಿಖಾ ತಂಡ ಪತ್ತೆಹಚ್ಚಿದೆ.
₹ 215 ದರದ ಎರಡು ಟಿಕೆಟ್ಗಳಿಗೆ ₹ 430ರ ಬದಲು₹500 ಪಡೆದಿದ್ದರು. ಇನ್ನೊಂದು ಪ್ರಕರಣದಲ್ಲಿ ₹ 480 ಪಡೆದಿದ್ದರು. ಪ್ರಯಾಣಿಕರ ಬಳಿ ವಿಚಾರಿಸಿದಾಗಲೂ ಅವರು ಈ ವಂಚನೆಯ ಬಗ್ಗೆ ಮಾಹಿತಿ ನೀಡಿದರು.
ಪ್ರಯಾಣಿಕರ ಹೇಳಿಕೆ ಮತ್ತು ಸ್ಥಳ ಪರಿಶೀಲನೆ ಆಧಾರದಲ್ಲಿ ಏಜೆನ್ಸಿಯನ್ನು ಸ್ಥಗಿತಗೊಳಿಸಲಾಗಿದೆ. ಅವರಿಗೆ ನೋಟಿಸ್ ನೀಡಲಾಗಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.