ಬೆಂಗಳೂರು: ಆರನೇ ವೇತನ ಆಯೋಗದ ಶಿಫಾರಸು ಅನ್ವಯಗೊಳಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಸಾರಿಗೆ ನೌಕರರು, ಶನಿವಾರ ಅಲ್ಲಲ್ಲಿ ಭಿತ್ತಿಪತ್ರಗಳ ಪ್ರದರ್ಶನ ಮಾಡಿ ಗಮನ ಸೆಳೆದರು.
ಮೆಜೆಸ್ಟಿಕ್ ಸೇರಿ ಪ್ರಮುksrtಖ ಬಸ್ ನಿಲ್ದಾಣ, ಡಿಪೊಗಳು ಹಾಗೂ ಪ್ರಮುಖ ಸ್ಥಳಗಳಲ್ಲಿ ‘ಸಾರ್ವಜನಿಕರೇ ಕ್ಷಮಿಸಿ, ಸರ್ಕಾರ ನಮಗೆ ನೀಡಿದ ಭರವಸೆ ಮರೆತಿದೆ’, ‘6ನೇ ವೇತನ ಆಯೋಗದ ಆದೇಶ– ಸಾರಿಗೆ ನೌಕರರಿಗೆ ವಿಕಾಸ’, ‘ವೇತನ ಮತ್ತು ಸವಲತ್ತುಗಳಲ್ಲಿ ತಾರತಮ್ಯ ಆಗುತ್ತಿದೆ’, ‘ಸಾರಿಗೆ ನೌಕರರ ಸಮರಕ್ಕೂ ಸಿದ್ಧ, ಸಾವಿಗೂ ಸಿದ್ಧ’ ಎಂಬ ಭಿತ್ತಿಪತ್ರಗಳನ್ನು ನೌಕರರು ಪ್ರದರ್ಶಿಸಿದರು. ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಕರಪತ್ರಗಳನ್ನು ಹಂಚಿ, ಹೋರಾಟ ಬೆಂಬಲಿಸುವಂತೆ ಮನವಿ ಮಾಡಿದರು.
‘ಸಿಬ್ಬಂದಿ ಸಾರಿಗೆ ನಿಗಮಗಳ ಎಲ್ಲಾ ಡಿಪೊಗಳಲ್ಲಿ ಭಾನುವಾರ ಧರಣಿ ನಡೆಸಲಿದ್ದಾರೆ. ಏ. 6ರಂದು ನೌಕರರು ಹಾಗೂ ಕುಟುಂಬದ ಸದಸ್ಯರೊಂದಿಗೆ ಸಾಮೂಹಿಕ ಉಪವಾಸ ಸತ್ಯಾಗ್ರಹ ಮಾಡಲಿದ್ದಾರೆ. 7ರಿಂದ ಬಸ್ ಸಂಚಾರ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತದೆ’ ಎಂದು ಸಾರಿಗೆ ನೌಕರರ ಕೂಟ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.