ADVERTISEMENT

ಮೇಲ್‍ಮರವತ್ತೂರಿಗೆ ಒಪ್ಪಂದದ ಬಸ್‌ ವಿಶೇಷ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2018, 19:46 IST
Last Updated 1 ಡಿಸೆಂಬರ್ 2018, 19:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮವು ತಮಿಳುನಾಡಿನ ಮೇಲ್‍ಮರವತ್ತೂರು ಓಂ ಶಕ್ತಿ ದೇವಸ್ಥಾನಕ್ಕೆ ಹೋಗಲು ಸಾಂದರ್ಭಿಕ ಒಪ್ಪಂದದ ಮೇಲೆ ಬಸ್‌ಗಳನ್ನು ಒದಗಿಸಲು ವಿಶೇಷ ವ್ಯವಸ್ಥೆ ಮಾಡಿದೆ.

ಈ ಸಂಬಂಧ ನಗರದ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣದ ಘಟಕ-5, 6 ಮತ್ತು ಶಾಂತಿನಗರದಲ್ಲಿರುವ ಘಟಕ-1, 2, 4 ರಲ್ಲಿ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದೆ.

ಕರ್ನಾಟಕ ಸಾರಿಗೆ ಮಾದರಿಯ 55 ಆಸನಗಳ ವಾಹನಗಳನ್ನು ಪ್ರತಿ ಕಿಲೋಮೀಟರ್‌ಗೆ ₹ 39 ದರದಲ್ಲಿ ಒದಗಿಸಲಾಗುವುದು. ಅಂತರರಾಜ್ಯ ಪರವಾನಗಿ ದರವನ್ನು ಪ್ರತ್ಯೇಕ ಪಾವತಿಸಬೇಕು.

ADVERTISEMENT

ಬೆಂಗಳೂರು ಹೊರತಾಗಿ ಇತರ ಸ್ಥಳಗಳಲ್ಲಿ ನಿಗಮದ ಬಸ್ ನಿಲ್ದಾಣ ಮತ್ತು ಘಟಕಗಳನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ಮೊ. 77609 90535 ಸಂಪರ್ಕಿಸಬಹುದು ಎಂದು ನಿಗಮದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.