ADVERTISEMENT

ಲಾಕರ್‌ ಕದ್ದೊಯ್ಯಲು ಯತ್ನಿಸಿ ಸಿಕ್ಕ!

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2019, 20:15 IST
Last Updated 7 ಸೆಪ್ಟೆಂಬರ್ 2019, 20:15 IST

ಬೆಂಗಳೂರು: ಕಂಪನಿಯ ಮಾಲೀಕರ ಲಾಕರ್‍ ಕದ್ದು ಅಸ್ಸಾಂಗೆ ಪರಾರಿಯಾಗಲು ಯತ್ನಿಸಿದ ಕಳ್ಳನನ್ನು ಕೃತ್ಯ ನಡೆದ 24 ಗಂಟೆಯಲ್ಲಿ ಬಂಧಿಸುವಲ್ಲಿ ಆಗ್ನೇಯ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಡೇಪಾಳ್ಯದ ಮುನೇಶ್ವರ ನಗರದ ಪ್ರಸಿದ್ಧ ನಿಂಜಾ ಕಾರ್ಟ್‌ ಕಂಪನಿಯ ಉದ್ಯೋಗಿ, ಅಸ್ಸಾಂನ ಕರೀಂಗಂಜ್‍ ನಿವಾಸಿ ಮುಜಾಕಿರ್ ಹುಸೇನ್ (19) ಬಂಧಿತ ಆರೋಪಿ. ಆತನಿಂದ ₹ 12 ಲಕ್ಷ ನಗದು, ಗೋದ್ರೇಜ್‌ ಕಂಪನಿ ಲಾಕರ್‌ ವಶಪಡಿಸಿಕೊಳ್ಳಲಾಗಿದೆ.

ಅಸ್ಸಾಂನಿಂದ ಬಂದಿದ್ದ ಮುಜಾಕಿರ್ ಹುಸೇನ್‌ಗೆ ಮಾಲೀಕರೇ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದರು. ಕೆಲವೇ ದಿನಗಳಲ್ಲೇ ಮಾಲೀಕರ ನಂಬಿಕೆ ಗಳಿಸಿದ್ದ ಆರೋಪಿ, ಕಚೇರಿಯಲ್ಲಿ ವ್ಯಾಪಾರದ ಹಣವನ್ನು ಗೋದ್ರೇಜ್ ಲಾಕರ್‌ನಲ್ಲಿಡುವುದನ್ನು ನೋಡಿದ್ದ. ಮಾಲೀಕರು ಹೊರಗೆ ಹೋಗಿದ್ದಾಗ ಕೀ ತೆಗೆಯಲು ಗೊತ್ತಾಗದೆ, ಲಾಕರ್‌ ಅನ್ನೇ ದೋಚಿ ಪರಾರಿಯಾಗಿದ್ದ.

ADVERTISEMENT

ಕಂಪನಿ ಮಾಲೀಕರು ಈ ಕುರಿತು ದೂರು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.