ರಾಜರಾಜೇಶ್ವರಿನಗರ: ನಗರದ ಐತಿಹಾಸಿಕ ಶ್ರೀಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಬುಧವಾರ ನಡೆಯಲಿದೆ. ಜಾತ್ರೆಯ ಅಂಗವಾಗಿಸಂಕ್ರಾಂತಿ ಸಂತೆ, ಗಿರಿಜಾ ಕಲ್ಯಾಣೋತ್ಸವ, ಉಚಿತ ಕಡಲೆಕಾಯಿ ಪರಿಷೆಯನ್ನೂ ಹಮ್ಮಿಕೊಳ್ಳಲಾಗಿದೆ.ಸೋಂಪುರ, ಚನ್ನವೀರಯ್ಯನಪಾಳ್ಯ, ವರಾಹಸಂದ್ರದಲ್ಲಿ ಈ ಕಾರ್ಯಕ್ರಮಗಳು ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.
ಬಸವೇಶ್ವರ ಭಕ್ತಮಂಡಳಿಯ ಅಧ್ಯಕ್ಷ ಎಂ.ರುದ್ರೇಶ್, ‘ಧಾರ್ಮಿಕ ಪರಂಪರೆ, ಇತಿಹಾಸ, ಗ್ರಾಮೀಣ ಸೊಗಡಿನ ಹಬ್ಬ ಹರಿದಿನಗಳನ್ನು ನಮ್ಮ ಯುವ ಜನಾಂಗ ಮರೆಯಬಾರದು ಎಂಬ ಉದ್ದೇಶದಿಂದ ಈ
ಜಾತ್ರಾ ಮಹೋತ್ಸವವನ್ನು ತಪ್ಪದೇ ಆಚರಿಸಲಾಗುತ್ತಿದೆ’ ಎಂದು ಹೇಳಿದರು.
‘ಕಡಲೆಕಾಯಿ ಪರಿಷೆಯಲ್ಲಿ ಕನಿಷ್ಠ 50 ರಿಂದ 70 ಸಾವಿರ ಜನರಿಗೆ ಎರಡು ಸೇರು ಕಡಲೆಕಾಯಿ , ಕಬ್ಬು, ಗೆಣಸನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು, ಈ ಸಲುವಾಗಿಯೇ ಪಕ್ಕದ ರಾಜ್ಯಗಳಿಂದ ಈಗಾಗಲೇ ಲಾರಿ ಗಟ್ಟಲೆ ಕಡಲೆಕಾಯಿ , ಕಬ್ಬು, ಗೆಣಸನ್ನು ತಂದು ಶೇಖರಿಸಿಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.