ADVERTISEMENT

ಜಾತಿ ತೊರೆಯಿರಿ ಎಂದವರನ್ನೇ ಜಾತಿ ಬ್ರ್ಯಾಂಡ್ ಮಾಡುತ್ತಿದ್ದಾರೆ’: ಎಸ್‌.ಶಂಕರ್‌

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 21:50 IST
Last Updated 6 ಡಿಸೆಂಬರ್ 2021, 21:50 IST
ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಎಚ್‌.ಎನ್‌.ಸುರೇಶ್, ಎಂ.ಆರ್‌.ಸತ್ಯನಾರಾಯಣ, ಎಸ್‌.ರಂಗಪ್ಪ ಹಾಗೂ ಎಸ್‌.ಶಂಕರ್‌ ಶಾನಭಾಗ ಪುಷ್ಪನಮನ ಸಲ್ಲಿಸಿದರು      –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಎಚ್‌.ಎನ್‌.ಸುರೇಶ್, ಎಂ.ಆರ್‌.ಸತ್ಯನಾರಾಯಣ, ಎಸ್‌.ರಂಗಪ್ಪ ಹಾಗೂ ಎಸ್‌.ಶಂಕರ್‌ ಶಾನಭಾಗ ಪುಷ್ಪನಮನ ಸಲ್ಲಿಸಿದರು      –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಜಾತಿಯನ್ನು ತೊರೆದು ಬಾಳಿರಿ ಎಂದವರನ್ನೇ ಜಾತಿಯ ಬ್ರ್ಯಾಂಡ್‌ ಆಗಿ ಮಾಡಲಾಗುತ್ತಿದೆ. ದಾಸರ ತತ್ವಗಳನ್ನು ಅಳವಡಿಸಿಕೊಳ್ಳುವ ಬದಲಿಗೆ ಅವರ ಹೆಸರನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಾಗುತ್ತಿದೆ’ ಎಂದು ಗಾಯಕ ಎಸ್‌.ಶಂಕರ್‌ ಶಾನಭಾಗ ಹೇಳಿದರು.

ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಕನಕ ಕೀರ್ತನ ಕಾರ್ಯಾಗಾರದ ಉದ್ಧಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್‌.ರಂಗಪ್ಪ, ‘ಕನಕದಾಸರ ತತ್ವಗಳನ್ನು ಸಾರುವ ಪ್ರಯತ್ನ ಇದು. ಐದು ದಿನಗಳ ಕಾರ್ಯಾಗಾರದಲ್ಲಿ ಸಾಧ್ಯವಾದಷ್ಟು ಕಲಿತುಕೊಂಡು, ಅದನ್ನು ಇದೇ ವೇದಿಕೆಯಲ್ಲಿ ಪ್ರದರ್ಶಿಸುವ ಮೂಲಕಅವಕಾಶಗಳನ್ನು ಸೃಷ್ಟಿಸಿಕೊಳ್ಳಿ’ ಎಂದು ಹೇಳಿದರು.

ADVERTISEMENT

ಗಾಯಕಿ ಟಿ.ಎಸ್‌.ಸತ್ಯವತಿ, ‘ಕನಕದಾಸರ ಕೀರ್ತನೆಗಳು ಸಂಗೀತದ ಎಲ್ಲಾ ಪ್ರಕಾರಗಳಿಗೆ ಹೊಂದಿಕೊಳ್ಳು
ತ್ತವೆ’ ಎಂದರು.

ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್‌.ಸುರೇಶ್, ‘ಕನಕದಾಸರ ದಾಸರ ಕೀರ್ತನೆಗಳು ಸಾರ್ವಕಾಲಿಕ. ಆ ಕೀರ್ತನೆಗಳು ಮನೆ ಮನಗಳನ್ನು ತಲುಪಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.