ಬೆಂಗಳೂರು: ನಗರದ ಮಲ್ಲೇಶ್ವರದಲ್ಲಿ ಪ್ರತಿಷ್ಠಿತ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ ಕಂಪನಿಯ ನೂತನ ಮಳಿಗೆ ಶನಿವಾರದಿಂದ ಕಾರ್ಯಾರಂಭ ಮಾಡಿತು.
ಸಂಪಿಗೆ ರಸ್ತೆಯಲ್ಲಿರುವ ಈ ಮಳಿಗೆಯನ್ನು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಉದ್ಘಾಟಿಸಿದರು.
‘ಮಲ್ಲೇಶ್ವರದಲ್ಲಿ ಈ ಮಳಿಗೆ ಉದ್ಘಾಟನೆಯೊಂದಿಗೆ ಕರ್ನಾಟಕದಲ್ಲಿ ನಮ್ಮ ಕಂಪನಿಯ ಅಸ್ತಿತ್ವವು ಮತ್ತಷ್ಟು ಬಲಿಷ್ಠಗೊಂಡಿದೆ. ಮಳಿಗೆಗಳ ಸಂಖ್ಯೆ ಮತ್ತು ಚಿನ್ನಾಭರಣಗಳ ಮಾರಾಟದ ನಿಟ್ಟಿನಲ್ಲಿ ನಾವು ವಿಶ್ವದ ನಂಬರ್ ಒನ್ ಚಿನ್ನಾಭರಣ ಮಾರಾಟ ಕಂಪನಿ ಆಗುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ’ ಎಂದು ಮಲಬಾರ್ ಸಮೂಹದ ಅಧ್ಯಕ್ಷ ಎಂ.ಪಿ. ಅಹಮದ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.