ADVERTISEMENT

ಹಾಲಿನ ಹಣ ಕೇಳಿದ್ದಕ್ಕೆ ಸಿ.ಎಂ. ಹೆಸರಿನಲ್ಲಿ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 25 ಮೇ 2020, 20:37 IST
Last Updated 25 ಮೇ 2020, 20:37 IST

ಬೆಂಗಳೂರು: ಹಾಲು ಮಾರಾಟ ಮಳಿಗೆ ಯುವತಿ ಜೊತೆ ಅನುಚಿತವಾಗಿ ವರ್ತಿಸಿ, ಮುಖ್ಯಮಂತ್ರಿ ಹೆಸರಿನಲ್ಲಿ ಬೆದರಿಕೆ ಹಾಕಿದ ಆರೋಪದಡಿ ಅಶೋಕ ಶೆಟ್ಟಿ ಎಂಬುವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

‘ಘಟನೆ ಬಗ್ಗೆ ಯುವತಿ ಪೋಷಕರು ದೂರು ನೀಡಿದ್ದಾರೆ. ಲೈಂಗಿಕ ದೌರ್ಜನ್ಯ ಹಾಗೂ ಬೆದರಿಕೆ ಆರೋಪದಡಿ ತಲಕಾವೇರಿ ಲೇಔಟ್ ನಿವಾಸಿಯಾದ ಅಶೋಕ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಅಮೃತಹಳ್ಳಿ ಪೊಲೀಸರು ಹೇಳಿದರು.

‘ಯುವತಿ ಪೋಷಕರು ಹಾಲು ಮಾರಾಟ ಮಳಿಗೆ ಇಟ್ಟುಕೊಂಡಿದ್ದಾರೆ. ಇದೇ 21ರಂದು ಬೆಳಿಗ್ಗೆ ಮಳಿಗೆಗೆ ಹೋಗಿದ್ದ ಅಶೋಕ ಹಾಲು ಖರೀದಿಸಿದ್ದ. ಹಣ ಕೇಳಿದ್ದಕ್ಕಾಗಿ ಯುವತಿ ಕೈ ಹಿಡಿದು ಅನುಚಿತವಾಗಿ ವರ್ತಿಸಿದ್ದ. ‘ನಾನು ಮುಖ್ಯಮಂತ್ರಿ ಕುಲ ಬಾಂಧವ. ಹಣ ಕೇಳಿದರೆ ಜೈಲಿಗೆ ಹಾಕಿಸುತ್ತೇನೆ’ ಎಂದೂ ಬೆದರಿಕೆ ಹಾಕಿದ್ದ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.