ADVERTISEMENT

ಬೆಂಗಳೂರು | ಮೊಬೈಲ್‌ ಕಳ್ಳತನ; ಮಂಗಳಮುಖಿಯರು ಸೇರಿ ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 11 ಜುಲೈ 2023, 14:48 IST
Last Updated 11 ಜುಲೈ 2023, 14:48 IST
ಭಗವಾನ್ ಹತ್ಯೆಗೆ ಸಂಚು; ನಾಲ್ವರ ಬಂಧನ
ಭಗವಾನ್ ಹತ್ಯೆಗೆ ಸಂಚು; ನಾಲ್ವರ ಬಂಧನ   

ಬೆಂಗಳೂರು: ಮೊಬೈಲ್ ಹಾಗೂ ಪರ್ಸ್ ದೋಚಿ ಪರಾರಿಯಾಗುತ್ತಿದ್ದ ಮೂವರು ಮಂಗಳಮುಖಿಯರು ಸೇರಿದಂತೆ ನಾಲ್ವರು ಆರೋಪಿಗಳನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಸ್ನೇಹಾ, ಆವಿಷ್ಕಾ, ದೀಪಿಕಾ ಹಾಗೂ ಆಟೊ ಚಾಲಕ ಪ್ರಕಾಶ್ ಬಂಧಿತ ಆರೋಪಿಗಳು. ರಸ್ತೆಗಳಲ್ಲಿ ಒಂಟಿಯಾಗಿ ತೆರಳುತ್ತಿದ್ದವರನ್ನೇ ಗುರಿಯಾಗಿಸಿ ಇವರು ಸುಲಿಗೆ ಮಾಡುತ್ತಿದ್ದರು.

ಕಳೆದ ಭಾನುವಾರ ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಹೆಬ್ಬಾಳ ಮಾರ್ಗದ ಮೇಲ್ಸೇತುವೆ ಬಳಿ ಕಾದು ನಿಂತಿದ್ದ 70 ವರ್ಷದ ವೃದ್ಧರೊಬ್ಬರ ಬಳಿ ಮೂವರು ಆರೋಪಿಗಳು ಹಣ ಕೇಳಿದ್ದಾರೆ. ಅವರು ಕೇಳಿದಷ್ಟು ಹಣ ನೀಡದಿರುವಾಗ ಮೊಬೈಲ್ ಹಾಗೂ ಪರ್ಸ್‌ ಕಸಿದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.