ADVERTISEMENT

ಸ್ನೇಹಿತನನ್ನು ಕೊಂದಿದ್ದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 18:29 IST
Last Updated 6 ಜನವರಿ 2021, 18:29 IST

ಬೆಂಗಳೂರು: ನೀರಿನ ವಿಚಾರಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂನ ಮಿಸ್ಬಾ ಹುಸೇನ್ ಲಷ್ಕರ್ (20) ಕೊಲೆಯಾದ ಯುವಕ. ಸ್ನೇಹಿತಆರೀಫುದ್ದಿನ್ ಆರೋಪಿ.

ಆರು ತಿಂಗಳ ಹಿಂದೆಅಸ್ಸಾಂನಿಂದ ಬಂದಿದ್ದ ಮಿಸ್ಬಾ, ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಆರೋಪಿ ಆರೀಫುದ್ದಿನ್ ಕೂಡ ಅದೇ ಕೆಲಸದಲ್ಲಿದ್ದ. ಇತ್ತೀಚೆಗೆ ನೀರಿನ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿತ್ತು.

ADVERTISEMENT

ಇದರಿಂದ ಕೋಪಗೊಂಡಿದ್ದ ಆರೀಫುದ್ದಿನ್, ಮಿಸ್ಬಾನನ್ನು ಮನೆಗೆ ಕರೆಸಿಕೊಂಡು, ಉಸಿರುಗಟ್ಟಿ ಕೊಲೆ ಮಾಡಿದ್ದ. ಯಾರಿಗೂ ಅನುಮಾನ ಬರದಂತೆ ನೀರಿನ ಸಂಪ್‍ನಲ್ಲಿ ಶವ ಬಿಸಾಡಿದ್ದ. ಮಿಸ್ಬಾನ ಮೊಬೈಲ್ ಸ್ವಿಚ್ ಆಫ್ ಮಾಡಿ, ಅಸ್ಸಾಂಗೆ ಪರಾರಿಯಾಗಿದ್ದ.

ಮಿಸ್ಬಾ ಕಾಣೆಯಾಗಿದ್ದಾನೆ ಎಂದು ಸಹೋದರ ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿದ್ದರು. ಮೊಬೈಲ್‌ನಿಂದ ಆರೋಪಿಯ ಸುಳಿವು ಸಿಕ್ಕಿದ್ದು, ಅಸ್ಸಾಂನಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಅಸ್ಸಾಂ ಪೊಲೀಸರ ಸಹಾಯದಿಂದ ಆರೋಪಿಯನ್ನು ಬಂಧಿಸಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.