ADVERTISEMENT

‘ಸ್ವರ ಕಾವೇರಿ ಸಂಗೀತ ಉತ್ಸವ’ ಫೆ. 23ರಿಂದ

​ಪ್ರಜಾವಾಣಿ ವಾರ್ತೆ
Published 10 ಜನವರಿ 2023, 19:31 IST
Last Updated 10 ಜನವರಿ 2023, 19:31 IST

ಬೆಂಗಳೂರು: ಭಾರತೀಯ ಸಾಮಗಾನ ಸಭಾದ 14ನೇ ವಾರ್ಷಿಕೋತ್ಸವದ ಅಂಗವಾಗಿ ಫೆ. 23 ರಿಂದ 26ರವರೆಗೆ ‘ಸ್ವರ ಕಾವೇರಿ’ ಸಂಗೀತ ಉತ್ಸವ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿದೆ.

ಫೆ. 26ರಂದು ನಡೆಯುವ ಕಾರ್ಯಕ್ರಮದಲ್ಲಿ ರಂಜನಿ ಮತ್ತು ಗಾಯತ್ರಿ ಸಹೋದರಿಯರಿಗೆ ‘ಸಾಮಗಾನ ಮಾತಂಗ ರಾಷ್ಟ್ರೀಯ ಪ್ರಶಸ್ತಿ’ಯನ್ನು ನೀಡಲಾಗುವುದು.

ಸ್ವರ ಕಾವೇರಿ ಸಂಗೀತ ಉತ್ಸವದಲ್ಲಿ ರಂಜನಿ ಗಾಯತ್ರಿ, ರಾಜೇಶ್ ವೈದ್ಯ, ಸಂದೀಪ್ ನಾರಾಯಣ್, ತ್ರಿಚೂರ್ ಸಹೋದರರು, ಶ್ರೀರಂಜನಿ ಸಂತನಗೋಪಾಲನ್, ಅಮೃತ ವೆಂಕಟೇಶ್, ಐಶ್ವರ್ಯಾ ವಿದ್ಯಾ ರಘುನಾಥ್, ಅನಹಿತ–ಅಪೂರ್ವ, ಮಾಧುರಿ ಕೌಶಿಕ್ ಭಾಗವಹಿಸಲಿದ್ದಾರೆ ಎಂದು ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಎಚ್.ವಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.