ADVERTISEMENT

ಸುಳ್ಳು ಹೇಳಿಕೆಗಳಿಗೆ ಕಿವಿಗೊಡಬೇಡಿ: ಡಾ.ನಟರಾಜ್ ಹುಳಿಯಾರ್‌

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2019, 19:46 IST
Last Updated 23 ಮಾರ್ಚ್ 2019, 19:46 IST
ಕಾರ್ಯಕ್ರಮದಲ್ಲಿ ನಟರಾಜ್ ಹುಳಿಯಾರ್‌ ಅವರು ಸಮಾಜವಾದಿ ಚಿಂತಕ ಶ್ರೀವಿಷ್ಣು ನಾಯ್ಕ ಅವರಿಗೆ ‘ಡಾ.ರಾಮಮನೋಹರ ಲೋಹಿಯಾ ಪ್ರಶಸ್ತಿ’ ಪ್ರದಾನ ಮಾಡಿದರು. (ಎಡದಿಂದ) ಬಸವ ಇಂಟರ್‌ನ್ಯಾಷನಲ್‌ ಫೌಂಡೇಶನ್‌ ಅಧ್ಯಕ್ಷ ಮಹದೇವಯ್ಯ, ರವಿವರ್ಮ ಕುಮಾರ್, ರಂಗಕರ್ಮಿ ಕೆ.ವಿ.ನಾಗರಾಜಮೂರ್ತಿ ಇದ್ದಾರೆ –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ನಟರಾಜ್ ಹುಳಿಯಾರ್‌ ಅವರು ಸಮಾಜವಾದಿ ಚಿಂತಕ ಶ್ರೀವಿಷ್ಣು ನಾಯ್ಕ ಅವರಿಗೆ ‘ಡಾ.ರಾಮಮನೋಹರ ಲೋಹಿಯಾ ಪ್ರಶಸ್ತಿ’ ಪ್ರದಾನ ಮಾಡಿದರು. (ಎಡದಿಂದ) ಬಸವ ಇಂಟರ್‌ನ್ಯಾಷನಲ್‌ ಫೌಂಡೇಶನ್‌ ಅಧ್ಯಕ್ಷ ಮಹದೇವಯ್ಯ, ರವಿವರ್ಮ ಕುಮಾರ್, ರಂಗಕರ್ಮಿ ಕೆ.ವಿ.ನಾಗರಾಜಮೂರ್ತಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜಕೀಯ ನಾಯಕರ ಸುಳ್ಳು ಹೇಳಿಕೆಗಳಿಗೆ ಎಂದಿಗೂ ಕಿವಿಗೊಡಬಾರದು. ಅವರು ಯಾವ ಸಮಯಕ್ಕೆ ಹೇಗೆ ಬೇಕಾದರೂ ವರ್ತಿಸುವ ನಾಟಕಕಾರರು’ ಎಂದು ಚಿಂತಕ ಡಾ.ನಟರಾಜ್ ಹುಳಿಯಾರ್‌ ಅಭಿಪ್ರಾಯಪಟ್ಟರು.

ಭಾರತ ಯಾತ್ರಾ ಕೇಂದ್ರವು ಇಲ್ಲಿ ಶನಿವಾರ ಆಯೋಜಿಸಿದ್ದ ಸಮಾಜವಾದಿ ಹರಿಕಾರ ಡಾ.ರಾಮಮನೋಹರ ಲೋಹಿಯಾ ಜನ್ಮದಿನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.‌

‌‌‘ಟಿ.ವಿ. ಚರ್ಚೆ ವೇಳೆ ಮೂರು ಪಕ್ಷಗಳ ನಾಯಕರು ಪರಸ್ಪರ ಕಚ್ಚಾಡುತ್ತಾರೆ. ನಮ್ಮೆದುರಿಗೆ ಆಡುವ ನಾಟಕವದು. ಅದನ್ನರಿಯದೆ ಅವರಂತೆ ನಾವೂ ವರ್ತಿಸುವುದು ದುರಂತ. ಸಮಾಜ ಪರಿವರ್ತನೆಯಾಗಲು ಗಾಂಧಿ, ಅಂಬೇಡ್ಕರ್, ಲೋಹಿಯಾ ಅವರ ಚಿಂತನೆಗಳಿಗೆ ಮರಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಎಂ.ಪಿ.ಪ್ರಕಾಶ್‌ ಸಮಾಜಮುಖಿ ಟ್ರಸ್ಟ್‌ ಮತ್ತು ಡಾ.ರಾಮಮನೋಹರ ಲೋಹಿಯಾ ಸಮತಾ ವಿಚಾರ ಟ್ರಸ್ಟ್‌ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.