ADVERTISEMENT

ಬೆಂಗಳೂರು ನಗರದ ಗೋಡೆಗಳ ಮೇಲೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಯುಳ್ಳ ಭಿತ್ತಿಪತ್ರ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 7:15 IST
Last Updated 21 ಸೆಪ್ಟೆಂಬರ್ 2020, 7:15 IST
ಗೋಡೆಗಳ ಮೇಲೆ ಕಂಡುಬಂದ ಭಿತ್ತಿಪತ್ರ
ಗೋಡೆಗಳ ಮೇಲೆ ಕಂಡುಬಂದ ಭಿತ್ತಿಪತ್ರ   

ಬೆಂಗಳೂರು: ಅಧಿವೇಶನ ಆರಂಭವಾಗುತ್ತಿರುವ ಬೆನ್ನಲ್ಲೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಯುಳ್ಳ ಭಿತ್ರಿಪತ್ರಗಳನ್ನು ನಗರದ ಹಲವೆಡೆ ಗೋಡೆಗಳ ಮೇಲೆ ಅಂಟಿಸಲಾಗಿದೆ.

ಮೇಖ್ರಿ ವೃತ್ತ, ಅರಮನೆ ರಸ್ತೆ, ಶಂಕರ ಮಠ, ಕಾಮಾಕ್ಷಿಪಾಳ್ಯ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಸೋಮವಾರ ಭಿತ್ತಿಪತ್ರಗಳು ಕಂಡವು. ಆದರೆ, ಈ ಭಿತ್ತಿಪತ್ರಗಳನ್ನು ಅಂಟಿಸಿದ್ದು ಯಾರು ಎಂಬುದು ಗೊತ್ತಾಗಿಲ್ಲ.

₹2000 ಕೋಟಿ ಲೂಟಿ ಮಾಡಿರುವ ಸೋಂಕಿತ ಸರ್ಕಾರ ಹಾಗೂ ಹಣದಿಂದ ಹಣಕ್ಕಾಗಿ ಹಣಕ್ಕೋಸ್ಕರ ಅಧಿಕಾರ ಬಂದ ಸೋಂಕಿತ ಸರ್ಕಾರ ಸೇರಿದಂತೆ ಹಲವು ಘೋಷಣೆಗಳು ಭಿತ್ತಿಪತ್ರದಲ್ಲಿ ಇವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.