ADVERTISEMENT

ಉದ್ಯಾನಕ್ಕೆ ವಿಜಯಕುಮಾರ್ ಹೆಸರು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 3:14 IST
Last Updated 8 ಸೆಪ್ಟೆಂಬರ್ 2020, 3:14 IST
ಬಿ.ಎನ್.ವಿಜಯಕುಮಾರ್ ಅವರ ಪುತ್ಥಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುಷ್ಪನಮನ ಸಲ್ಲಿಸಿದರು. ಶಾಸಕಿ ಸೌಮ್ಯಾರೆಡ್ಡಿ ಇದ್ದರು.
ಬಿ.ಎನ್.ವಿಜಯಕುಮಾರ್ ಅವರ ಪುತ್ಥಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುಷ್ಪನಮನ ಸಲ್ಲಿಸಿದರು. ಶಾಸಕಿ ಸೌಮ್ಯಾರೆಡ್ಡಿ ಇದ್ದರು.   

ಬೆಂಗಳೂರು: ಜಯನಗರದಲ್ಲಿ ನವೀಕೃತ ಬುಲೇವಾರ್ಡ್ ಉದ್ಯಾನಕ್ಕೆ ಮಾಜಿ ಶಾಸಕ ಬಿ.ಎನ್.ವಿಜಯ್ ಕುಮಾರ್ ಅವರ ಹೆಸರಿಡಲಾಗಿದೆ. ನವೀಕೃತ ಉದ್ಯಾನವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಉದ್ಘಾಟಿಸಿದರು.

ಪಟ್ಟಾಭಿನಗರ ವಾರ್ಡ್‍ನಲ್ಲಿರುವ ಈ ಉದ್ಯಾನದಲ್ಲಿ ₹2 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಉದ್ಯಾನದಲ್ಲಿ ಬಿ.ಎನ್.ವಿಜಯಕುಮಾರ್ ಪುತ್ಥಳಿ ನಿರ್ಮಿಸಲಾಗಿದೆ. ಉದ್ಯಾನವು ಒಟ್ಟು 3,456 ಚ.ಮೀ ಉದ್ದವಿದೆ. ವಾಯುವಿಹಾರಕ್ಕೆ ಅನುಕೂಲವಾಗುವಂತೆ 256 ಮೀಟರ್ ಉದ್ದದ ಪಾದಚಾರಿ ಮಾರ್ಗ ನಿರ್ಮಿಸಲಾಗಿದೆ.

ಹಿರಿಯ ನಾಗರಿಕರಿಗಾಗಿ ವಿಶ್ರಾಂತಿ ಸ್ಥಳ ಹಾಗೂ ತೆರೆದ ವ್ಯಾಯಾಮ ಉಪಕರಣ ಅಳವಡಿಸಲಾಗಿದೆ. ಉದ್ಯಾನದ ಹಲವೆಡೆ 'ಕ್ಯಾಸ್ಟ್ ಐರನ್' ಶೈಲಿಯ ಆಸನಗಳನ್ನು ಹಾಕಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.