ಬೆಂಗಳೂರು:ವಿದ್ಯುತ್ಕೇಂದ್ರಗಳಲ್ಲಿ ತುರ್ತು ಕಾರ್ಯನಿರ್ವಹಣೆ ಕೈಗೆತ್ತಿಕೊಂಡಿರುವುದರಿಂದ ಇದೇ 27ರಂದು ಬೆಳಿಗ್ಗೆ 10ರಿಂದ ಸಂಜೆ 5 ರವರೆಗೆ ನಗರದ ವಿವಿಧ ಸ್ಥಳಗಳಲ್ಲಿವಿದ್ಯುತ್ವ್ಯತ್ಯಯಆಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ವ್ಯತ್ಯಯಆಗಲಿರುವ ಸ್ಥಳಗಳು: ಉತ್ತರಹಳ್ಳಿ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಭೂಮಿಕ ಲೇಔಟ್, ಪಟ್ಟಣಗೆರೆ, ಬಿ.ಎಚ್.ಇ.ಎಲ್. ಲೇಔಟ್, ಹರ್ಷ ಲೇಔಟ್, ವಿದ್ಯಾಪೀಠ ರಸ್ತೆ, ಬಿ.ಜಿ.ಎಸ್. ಆಸ್ಪತ್ರೆ ರಸ್ತೆ, ಮೈಸೂರು ಹೈವೆ, ಸಿದ್ದಾರ್ಥ ಶಾಲೆ ರಸ್ತೆ, ಮುನೇಶ್ವರ ಲೇಔಟ್, ಪ್ರಸನ್ನ ಲೇಔಟ್, ಮಾರುತಿನಗರ, ಕೆಂಪೇಗೌಡ ನಗರ, ಸನ್ಸಿಟಿ, ಬಿ.ಡಿ.ಕಾಲೊನಿ, ಗಾಂಧಿನಗರ, ಉಲ್ಲಾಳನಗರ, ಭುವನೇಶ್ವರಿನಗರ, ದೊಡ್ಡಬಸ್ತಿ ಮುಖ್ಯರಸ್ತೆ, ಕಲ್ಯಾಣಿ ಲೇಔಟ್, ಆರ್.ಆರ್.ಲೇಔಟ್, ಉಪಾಧ್ಯಾಯ ಲೇಔಟ್, ಕುವೆಂಪು ಮುಖ್ಯರಸ್ತೆ, ಜಿ.ಕೆ.ಗಲ್ಲಿ ರಸ್ತೆ, ಗಂಗಾನಗರ, ಯಮುನಾಗರ ಶಾಲೆ, ಬಿ.ಇ.ಎಲ್. 1 ಮತ್ತು 2ನೇ ಹಂತ, ಗಾಂಧಿ ಪಾರ್ಕ್–1, ಸರ್.ಎಂ.ವಿ. 3 ಮತ್ತು 5ನೇ ಬ್ಲಾಕ್, ಭವಾನಿನಗರ, ಅಮ್ಮ ಆಶ್ರಮ ರಸ್ತೆ ಮತ್ತು ಸುತ್ತಲಿನ ಪ್ರದೇಶ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.