ADVERTISEMENT

ಬೆಂಗಳೂರು: ಮಾಗಡಿ ರಸ್ತೆಯ ಸುಂಕದಕಟ್ಟೆಯಲ್ಲಿ ಮುತ್ತಿನ ಪಲ್ಲಕ್ಕಿ ಉತ್ಸವ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2024, 15:36 IST
Last Updated 10 ಆಗಸ್ಟ್ 2024, 15:36 IST
ಸುಂಕದಕಟ್ಟೆಯಲ್ಲಿ ಸಲ್ಲಾಪುರದಮ್ಮ, ಮುತ್ತುರಾಯ ಸ್ವಾಮಿ, ಬೋಡುಬಂಡೆ ಆಂಜನೇಯ ಸ್ವಾಮಿ ದೇವರ ಪಲ್ಲಕ್ಕಿ ಉತ್ಸವ ನಡೆಯಿತು
ಸುಂಕದಕಟ್ಟೆಯಲ್ಲಿ ಸಲ್ಲಾಪುರದಮ್ಮ, ಮುತ್ತುರಾಯ ಸ್ವಾಮಿ, ಬೋಡುಬಂಡೆ ಆಂಜನೇಯ ಸ್ವಾಮಿ ದೇವರ ಪಲ್ಲಕ್ಕಿ ಉತ್ಸವ ನಡೆಯಿತು   

ರಾಜರಾಜೇಶ್ವರಿನಗರ: ಮಾಗಡಿ ರಸ್ತೆಯ ಸುಂಕದಕಟ್ಟೆಯಲ್ಲಿರುವ ಸಲ್ಲಾಪುರದಮ್ಮ ಅಕ್ಕ ತಂಗಿ ದೇವಿಯರು, ಮುತ್ತುರಾಯಸ್ವಾಮಿ ಮತ್ತು ಬೋಡುಬಂಡೆ ಆಂಜನೇಯ ದೇವರ ಜಾತ್ರಾ ಮಹೋತ್ಸವ, ಊರ ಹಬ್ಬ ಸಡಗರದಿಂದ ನಡೆಯಿತು.

ಮಹದೇವಮ್ಮ, ಮದ್ದೂರಮ್ಮ, ಪಳೇಕಮ್ಮ ದೇವರಿಗೆ ಆರತಿ ಮತ್ತು ವಿಶೇಷ ಪೂಜೆಗಳು ನಡೆದವು.  ಸಲ್ಲಾಪುರದಮ್ಮ ದೇವಿಗೆ ತಂಬಿಟ್ಟಿನ ಆರತಿ ಮತ್ತು ಅಗ್ನಿಕೊಂಡ ನಡೆಯಿತು. ಸಲ್ಲಾಪುರದಮ್ಮ, ಮುತ್ತುರಾಯ ಸ್ವಾಮಿ, ಬೋಡುಬಂಡೆ ಆಂಜನೇಯ ಸ್ವಾಮಿ ದೇವರ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಿತು. ಸಾವಿರಾರು ಭಕ್ತರು ಭಾಗವಹಿಸಿದ್ದರು.

ಕೀಲುಕುದುರೆ, ಪಟದ ಕುಣಿತ, ಪೂಜಾ ಕುಣಿತ, ಗೊರವನ ಕುಣಿತ ಸೇರಿದಂತೆ ವಿವಿಧ ಕಲೆಗಳ ಪ್ರದರ್ಶನ ಜರುಗಿದವು. ಸುಂಕದಕಟ್ಟೆ ರಾಜಬೀದಿಗಳಲ್ಲಿ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಯುವ ಜನರು ಕುಣಿದು ಕುಪ್ಪಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.