ADVERTISEMENT

‘ಸಮಗ್ರ ಅಭಿವೃದ್ಧಿಗೆ ಮೋದಿ ಮತ್ತೊಮ್ಮೆ’

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 20:10 IST
Last Updated 14 ಏಪ್ರಿಲ್ 2019, 20:10 IST

ನೆಲಮಂಗಲ: ‘ಸ್ವಚ್ಛ ಆಡಳಿತ ನಡೆಸುವ, ನಿಸ್ವಾರ್ಥ ಸೇವೆ ಮಾಡುವ, ಸದಾ ದೇಶದ ಸಮಗ್ರ ಅಭಿವೃದ್ಧಿಯ ಬಗ್ಗೆ ಚಿಂತಿಸುವ ಪ್ರಧಾನಿ ಬೇಕಾದರೆ ಮೋದಿಯನ್ನು ಮತ್ತೊಮ್ಮೆ ಆಯ್ಕೆ ಮಾಡಿ’ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಬಸವಣ್ಣ ದೇವರ ಮಠದಲ್ಲಿ ಥಿಂಕರ್ಸ್ ಫೋರಂ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

‘ಮಹಾಘಟಬಂಧನದಲ್ಲಿ ಮೋದಿಗೆ ಸಮನಾದ ಒಬ್ಬ ನಾಯಕನಿಲ್ಲ. ಸಮಾರಂಭದ ವೇದಿಕೆಯಲ್ಲೆ ಕುರ್ಚಿಗಾಗಿ ಕಚ್ಚಾಡುವ ಅವರು ದೇಶ ಹೇಗೆ ನಿಭಾಯಿಸುತ್ತಾರೆ’ ಎಂದು ಪ್ರಶ್ನಿಸಿದರು.

ADVERTISEMENT

‘ಯಾರಿಗೂ ಸಿಗದೆ ತಿಂಗಳುಗಟ್ಟಲೆ ಮೋಜಿಗಾಗಿ ವಿದೇಶ ಪ್ರವಾಸ ಮಾಡುವ ನಾಯಕ ನಿಮಗೆ ಬೇಕೇ’ ಎಂದು ರಾಹುಲ್‌ ಗಾಂಧಿ ಹೆಸರು ಹೇಳದೆ ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.