ADVERTISEMENT

ಪರ್ಸ್‌ನಲ್ಲಿದ್ದ ₹45 ಸಾವಿರ ವಾರಸುದಾರನಿಗೆ ಒಪ್ಪಿಸಿದ ಪೊಲೀಸ್‌ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 16:53 IST
Last Updated 26 ಜನವರಿ 2022, 16:53 IST

ಬೆಂಗಳೂರು:₹45 ಸಾವಿರ ‌ನಗದು ಇದ್ದ ಪರ್ಸ್‌ವೊಂದು ಕೆಂಪೇಗೌಡ ನಗರ (ಕೆ.ಜಿ.ನಗರ) ಪೊಲೀಸ್‌ ಠಾಣೆ ಸಿಬ್ಬಂದಿಗೆ ದೊರೆತಿದ್ದು, ಅದನ್ನು ಅವರು ವಾರಸುದಾರರಿಗೆ ಹಿಂತಿರುಗಿಸಿದ್ದಾರೆ.

‘ರವಿ ಎಂಬುವರು ಮಗಳ ಶಾಲಾ ಶುಲ್ಕ ಪಾವತಿಸಲು ₹45 ಸಾವಿರ ಮೊತ್ತ ಸಾಲ ಪಡೆದಿದ್ದರು. ಅದನ್ನು ಪರ್ಸ್‌ನಲ್ಲಿ ಇಟ್ಟುಕೊಂಡು ಬನಶಂಕರಿ ಮಾರ್ಗವಾಗಿ ಹೋಗುತ್ತಿದ್ದ ವೇಳೆ ಅದು ಬಿದ್ದು ಹೋಗಿತ್ತು. ಗಸ್ತಿನಲ್ಲಿದ್ದ ಕಾನ್‌ಸ್ಟೆಬಲ್‌ಗಳಾದ ಮಾದಪ್ಪ ಹಾಗೂ ಯಲ್ಲಾಲಿಂಗ ಅವರಿಗೆ ಪರ್ಸ್‌ ಸಿಕ್ಕಿತ್ತು. ಅದರಲ್ಲಿದ್ದ ಗುರುತಿನ ಚೀಟಿಯ ಆಧಾರದಲ್ಲಿ ವಾರಸುದಾರರನ್ನು ಪತ್ತೆಹಚ್ಚಿ ಅವರಿಗೆ ಹಣದ ಸಮೇತ ಪರ್ಸ್‌ ಹಿಂತಿರುಗಿಸಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT