ADVERTISEMENT

ವಿದ್ಯುತ್‌ ವ್ಯತ್ಯಯ 19ರಿಂದ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 8:59 IST
Last Updated 17 ಏಪ್ರಿಲ್ 2021, 8:59 IST

ಬೆಂಗಳೂರು: ಭೂಗತ ಕೇಬಲ್‌ ಅಳವಡಿಕೆ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಇದೇ 19ರಿಂದ 24ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5.30ರ ತನಕ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಆರ್‌.ಬಿ.ಐ ಬಡಾವಣೆ, ಶ್ರೀನಿಧಿ ಬಡಾವಣೆ, ಜೆ.ಪಿ. ನಗರ 6ನೇ ಹಂತ, ಸಾರಕ್ಕಿ ತೋಟ, ರೋಸ್‌ ಗಾರ್ಡನ್‌, ಸಿಂಧೂರ್ ಕಲ್ಯಾಣಮಂಟಪ, ಸಿದ್ದೇಶ್ವರ ಥಿಯೇಟರ್, ಸಾರಕ್ಕಿ ಕೆರೆ, ಆಂಥೋನಿ ಕೈಗಾರಿಕಾ ಪ್ರದೇಶ, ರಾಜೀವ್‌ ಗಾಂಧಿ ರಸ್ತೆ, ಗಣಪತಿಪುರ, ಚುಂಚಘಟ್ಟ ರಸ್ತೆ,ತಿಪ್ಪಸಂದ್ರ, ಚನ್ನಮ್ಮ ಗಾರ್ಡನ್‌.

10.30ರಿಂದ ಸಂಜೆ 6.30:ಜೆ.ಪಿ.ನಗರ ಐದನೇ ಹಂತ, ವಿನಾಯಕ ನಗರ,ನಂಜುಂಡೇಶ್ವರ ಬಡಾವಣೆ, ಪಾಂಡುರಂಗ ನಗರ, ಬಿ.ಜಿ. ರಸ್ತೆ, ಆದರ್ಶ ಅಪಾರ್ಟ್‌ಮೆಂಟ್, ಅಡಿಗ ಹೋಟೆಲ್‌, ಎಸ್ಟೀಮ್‌ ಪಾರ್ಕ್‌ ರಸ್ತೆ ಹಾಗೂ ಸುತ್ತ–ಮುತ್ತಲಿನ ಪ್ರದೇಶಗಳು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.