ADVERTISEMENT

ವಿದ್ಯುತ್‌ ವ್ಯತ್ಯಯ ನಾಳೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 20:12 IST
Last Updated 16 ಸೆಪ್ಟೆಂಬರ್ 2020, 20:12 IST

ಬೆಂಗಳೂರು: ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಸೆ. 18 ಮತ್ತು 19ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಜಯದೇವ, ಕೆ.ಎಸ್. ಬಡಾವಣೆ, ಸಿಲ್ಕ್‌ಬೋರ್ಡ್‌ 29ನೇ ಮುಖ್ಯರಸ್ತೆ, ಬಿಟಿಎಂ ಎರಡನೇ ಹಂತ, ಎನ್.ಎಸ್. ಪಾಳ್ಯ, ಕೈಗಾರಿಕಾ ಪ್ರದೇಶ,ನಾರಾಯಣ ನಗರ, ಪಿ.ಎನ್.ಬಿ. ನಗರ, ಡಾಕ್ಟರ್ಸ್ ಕಾಲೊನಿ ಮತ್ತು ಸುತ್ತ–ಮುತ್ತಲಿನ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

19ರಂದು ವ್ಯತ್ಯಯ:19ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಜಕ್ಕರಾಯನ ಕೆರೆ ಪ್ರದೇಶ, ಹನುಮಂತಪ್ಪ ಕಾಲೊನಿ, ಪ್ಲಾಟ್‌ಫಾರಂ ರಸ್ತೆ, ಓಕಳಿಪುರ, ರಾಮಚಂದ್ರಾಪುರ, ನೆಹರೂನಗರ, ಶೇಷಾದ್ರಿಪುರ, ಜೆಸಿಡಬ್ಲ್ಯು ನಗರ, ವಿ.ವಿ. ಗಿರಿ ಕಾಲೊನಿ ಹಾಗೂ ಸುತ್ತಮುತ್ತಲಿನ ಪ್ರದೇಶ, ಮಲ್ಲೇಶ್ವರದ ಕೆಲವು ಭಾಗ, ಶಿರೂರು ಪಾರ್ಕ್, ಮಂತ್ರಿ ಗ್ರೀನ್‌ ಅಪಾರ್ಟ್‌ಮೆಂಟ್, ಮಂತ್ರಿ ಮಾಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.