ADVERTISEMENT

ವಿದ್ಯುತ್‌ ವ್ಯತ್ಯಯ ಇಂದು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 19:51 IST
Last Updated 19 ಡಿಸೆಂಬರ್ 2020, 19:51 IST

ಬೆಂಗಳೂರು: ನೆಲಗದರನಹಳ್ಳಿ ಮತ್ತು ಬೃಂದಾವನ ವಿದ್ಯುತ್‌ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಭಾನುವಾರ (ಡಿ.20) ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ತಿಗಳರಪಾಳ್ಯ, ಬಾಲಾಜಿನಗರ, ಗಂಗೊಂಡನಹಳ್ಳಿ, ಕಾಳಿಕಾನಗರ, ಅಂದ್ರಹಳ್ಳಿ, ನವಿಲುನಗರ, ಕರಿಓಬನಹಳ್ಳಿ, ಎಸ್.ಎಲ್.ವಿ. ಕಾಂಪೌಂಡ್, ಸುಪ್ರಭಾತನಗರ, ಇಂದಿರಾನಗರ ಮತ್ತು ಸುತ್ತಮುತ್ತಲಿನ ಪ್ರದೇಶ.

ಕರೀಂಸಾಬ್‌ ಬಡಾವಣೆ, ಹೆಗ್ಗನಹಳ್ಳಿ, ಕೆಟಿಜಿ ಕಾಲೇಜು ರಸ್ತೆ, ಲಕ್ಷ್ಮೀದೇವಿ ನಗರ ಮತ್ತು ಸುತ್ತ–ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ADVERTISEMENT

ವಿದ್ಯುತ್‌ ವ್ಯತ್ಯಯ ನಾಳೆಯಿಂದ: ಜಯದೇವ ಮತ್ತು ಸಾರಕ್ಕಿ ಉಪವಿಭಾಗದಲ್ಲಿ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ವಿಭಾಗದ ವ್ಯಾಪ್ತಿಯ ಪ್ರದೇಶಗಳಲ್ಲಿ ಇದೇ 21ರಿಂದ 24ರವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಇದೇ 21 ಮತ್ತು 23ರಂದು ಎನ್.ಎಸ್. ಕೈಗಾರಿಕಾ ಪ್ರದೇಶ, ಬಿಟಿಎಂ ಬಡಾವಣೆ ಎರಡನೇ ಹಂತ, ಮೈಕೊ ಬಡಾವಣೆ, ಆರ್‌.ಕೆ.ಕೆ. ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ 22 ಮತ್ತು 24ರಂದು ಕೆಇಬಿ ಬಡಾವಣೆ, ಗುರಪ್ಪನ ಪಾಳ್ಯ, ಬಿಟಿಎಂ ಬಡಾವಣೆ ಮೊದಲನೇ ಹಂತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.